- Advertisement -
- Advertisement -
ಸುಬ್ರಹ್ಮಣ್ಯ: ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿತ್ತು ಇಂತಹ ಪ್ರಕರಣಗಳು ಪುಣ್ಯ ಕ್ಷೇತ್ರಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇತ್ತೀಚೆಗೆ ಆರು ಮೊಬೈಲ್ ಗಳು ಕಾಣೆಯಾಗಿದ್ದವು. ಕಾಣೆಯಾಗಿದ್ದ ಬರೋಬ್ಬರಿ ಆರು ಮೊಬೈಲ್ ಗಳನ್ನು ಒಂದೇ ವಾರದಲ್ಲಿ ಪತ್ತೆ ಹಚ್ಚಿ ಸುಬ್ರಹ್ಮಣ್ಯ ಠಾಣಾ ಪೊಲೀಸರ ತಂಡ ಭಾರೀ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಈ ಪ್ರಕರಣದಲ್ಲಿ ಎಸ್.ಐ. ಕಾರ್ತಿಕ್ ಹಾಗೂ ಅವರ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿದ್ದು, ಮೊಬೈಲ್ಗಳನ್ನು ಮಿಂಚಿನ ವೇಗದಲ್ಲಿ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿದ್ದಾರೆ. ಬಳಿಕ ವಾರಿಸುದಾರರಿಗೆ ಹಿಂತಿರುಗಿಸಿದ್ದಾರೆ
- Advertisement -