Friday, June 27, 2025
Homeಅಪರಾಧಕೋಟೆಕಾರು ಬ್ಯಾಂಕ್‌ ದರೋಡೆ ಪ್ರಕರಣ; ಸ್ಥಳೀಯ ಸೂತ್ರಧಾರ ಶಶಿ ಥೇವರ್‌ ನೀಡಿದ್ದ ಪಿಸ್ತೂಲ್‌ ಪೊಲೀಸ್‌ ವಶ

ಕೋಟೆಕಾರು ಬ್ಯಾಂಕ್‌ ದರೋಡೆ ಪ್ರಕರಣ; ಸ್ಥಳೀಯ ಸೂತ್ರಧಾರ ಶಶಿ ಥೇವರ್‌ ನೀಡಿದ್ದ ಪಿಸ್ತೂಲ್‌ ಪೊಲೀಸ್‌ ವಶ

spot_img
- Advertisement -
- Advertisement -

ಉಳ್ಳಾಲ: ಕೋಟೆಕಾರು ಬ್ಯಾಂಕ್‌ ದರೋಡೆ ಪ್ರಕರಣಕ್ಕೆ ಸಂಬಂಧಿಸಿಸಂತೆ ಸ್ಥಳೀಯ ಸೂತ್ರಧಾರ ನೀಡಿದ್ದ ಪಿಸ್ತೂಲ್ ಅನ್ನು ಆರೋಪಿಯೋರ್ವನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ನಡೆದ ಶೂಟೌಟ್‌ ನಲ್ಲಿ ದರೋಡೆಯ ಸ್ಥಳೀಯ ಸೂತ್ರಧಾರ, ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಮೂಲದ ನಿವಾಸಿ ಶಶಿ ಥೇವರ್‌ (ಸ್ಥಳೀಯ ಹೆಸರು ಬೇರೆಯಾಗಿದೆ) ಪ್ರಮುಖ ಆರೋಪಿ ಮುರುಗಂಡಿಗೆ ನೀಡಿದ್ದ ಪಿಸ್ತೂಲನ್ನು ಶೂಟೌಟ್‌ ನಡೆದ ಸ್ಥಳದಿಂದ 200 ಮೀಟರ್‌ ದೂರದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ನು ಮುರುಗಂಡಿ ದರೋಡೆಗೆ ಸ್ಕೆಚ್‌ ರೂಪಿಸಿದ್ದ ಸ್ಥಳೀಯನ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಈ ದರೋಡೆಗೆ 6 ತಿಂಗಳ ಹಿಂದೆಯೇ ಸ್ಕೆಚ್‌ ರೂಪಿಸಿದ್ದರು ಎನ್ನಲಾಗಿದೆ.

ಅಷ್ಟೇಅಲ್ಲದೆ ದರೋಡೆಕೋರರಾದ ಮುರುಗಂಡಿ ಮತ್ತು ಶಶಿ ಥೇವರ್‌ ತಂಡ ಅಜ್ಜಿನಡ್ಕಕ್ಕೆ ನವೆಂಬರ್‌ನಲ್ಲಿ ಆಗಮಿಸಿದ್ದು, ಬ್ಯಾಂಕ್‌ ಪಕ್ಕದ ನಿರ್ಜನ ಪ್ರದೇಶದಲ್ಲಿ ಯೋಜನೆ ರೂಪಿಸಿ ಮುರುಗಂಡಿಗೆ ಪಿಸ್ತೂಲ್‌ ನೀಡಿತ್ತು ಎನ್ನಲಾಗಿದೆ. ಮುರುಗಂಡಿ ತಂಡವು ಇದನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಅಜ್ಜಿನಡ್ಕದ ಪೊದೆಯ ಬಳಿ ಅಡಗಿಸಿಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇನ್ನು ದರೋಡೆಗೆ ಸಂಬಂಧಿಸಿದಂತೆ ಶಶಿ ಧಾರಾವಿಯಲ್ಲೇ ಮುರುಗಂಡಿ ತಂಡಕ್ಕೆ ಕೆ.ಸಿ.ರೋಡ್‌ ದರೋಡೆಗೆ ತಾಲೀಮು ನಡೆಸಿದ್ದ ಎನ್ನಲಾಗುತ್ತಿದೆ. ಇದೀಗ ಪೊಲೀಸರು ಪ್ರಕರಣದ ಉಳಿದ ಮೂವರು ಹಾಗೂ ಸೂತ್ರಧಾರನಿಗಾಗಿ ಬಲೆ ಬೀಸಿದ್ದಾರೆ.

- Advertisement -
spot_img

Latest News

error: Content is protected !!