- Advertisement -
- Advertisement -
ಬಂಟ್ವಾಳ: ಅಪಘಾತದಲ್ಲಿ ಸಾವನ್ನಪ್ಪಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಬಂಟ್ವಾಳ ಬಿ.ಮೂಡ ಗ್ರಾಮದ ಅಗ್ರಬೈಲು ವೆಂಕಟ್ರಮಣ ಹೊಳ್ಳ ರವರ ಅಂತಿಮಯಾತ್ರೆ ಬಿ.ಸಿ ರೋಡ್ ನಲ್ಲಿ ನಡೆಯಿತು.

ಅಂತಿಮ ಯಾತ್ರೆಯಲ್ಲಿ ರಾಸ್ವಸೇಸಂ ಹಿರಿಯರಾದ ಡಾ.ಕಲ್ಲಡ್ಕ ಪ್ರಭಾಕರ್ ಭಟ್,ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ,ಬಿಜೆಪಿ ಪ್ರಮುಖರು,ಸಂಘಪರಿವಾರದ ಪ್ರಮುಖರು ಭಾಗವಹಿಸಿದರು.

ಮೈಸೂರು ರಾಷ್ಟ್ರೀಯ ಹೆದ್ದಾರಿ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಇಂದು ನಸುಕಿನಲ್ಲಿ ಬೈಕ್ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಬಂಟ್ವಾಳ ನಿವಾಸಿ ವೆಂಕಟ್ರಮಣ ಹೊಳ್ಳ ಸಾವನ್ನಪ್ಪಿದ್ದರು.
- Advertisement -