- Advertisement -
- Advertisement -
ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರೋಡ್ ಶೋ ರವಿವಾರದಂದು ಮಂಗಳೂರು ನಗರದಲ್ಲಿ ನಡೆಯಲಿದ್ದು, ಈ ಸಮಾರಂಭಕ್ಕೆ ಸಿದ್ದತೆಗಳು ಭರದಿಂದ ಸಾಗುತ್ತಿದೆ.
ಲೇಡಿಹಿಲ್ ನಿಂದ ಪಿವಿ ಎಸ್ ವೃತ್ತದವರೆಗೆ ಕಬ್ಬಿಣದ ತಡಬೇಲಿ ಹಾಕುವ ಕೆಲಸ ಆರಂಭಗೊಂಡಿದೆ. ರೋಡ್ ಶೋ ಆರಂಭಗೊಳ್ಳುವ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವನ್ನು ಅಲಂಕರಿಸುವ ಕಾರ್ಯಗಳು, ವಿದ್ಯುತ್ ದೀಪ ಅಳವಡಿಕೆ ಮೊದಲಾದವುಗಳು ಯುದ್ದೋಪಾದಿಯಲ್ಲಿ ಸಾಗುತ್ತಿದೆ.
ಸಂಚಾರಿ ಪೊಲೀಸರು ಸಂಚಾರ ಬದಲಾವಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -