Saturday, June 28, 2025
Homeಕರಾವಳಿಮಂಗಳೂರುಪುತ್ತೂರು; ಸಾಲ ಮರುಪಾವತಿ ಮಾಡುವಂತೆ ಕೇಳಲು ಹೋದ ಬ್ಯಾಂಕ್ ಸಿಬ್ಬಂದಿಗೆ ಜೀವ ಬೆದರಿಕೆ

ಪುತ್ತೂರು; ಸಾಲ ಮರುಪಾವತಿ ಮಾಡುವಂತೆ ಕೇಳಲು ಹೋದ ಬ್ಯಾಂಕ್ ಸಿಬ್ಬಂದಿಗೆ ಜೀವ ಬೆದರಿಕೆ

spot_img
- Advertisement -
- Advertisement -

ಪುತ್ತೂರು; ಸಾಲ ಮರುಪಾವತಿ ಮಾಡುವಂತೆ ಕೇಳಲು ಹೋದ ಬ್ಯಾಂಕ್ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ ಘಟನೆ ಬಲ್ನಾಡು ಗ್ರಾಮದ ಉಜಿರ್‌ಪಾದೆ ಎಂಬಲ್ಲಿ ನಡೆದಿದೆ.

ಚಿಕ್ಕಮಗಳೂರು ಕೊಪ್ಪ ತಾಲೂಕು ನಿವಾಸಿಯಾದ ಚೈತನ್ಯ ಹೆಚ್.ಸಿ  ಎಂಬವರು  ಭಾರತೀಯ ಸ್ಟೇಟ್‌ ಬ್ಯಾಂಕ್‌,  ಕೋರ್ಟ್‌ ರಸ್ತೆ, ಪುತ್ತೂರು ಇಲ್ಲಿ ರಿಲೇಶನ್ ಶಿಪ್‌ ಮ್ಯಾನೇಜರ್‌  ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ  ಬ್ಯಾಂಕ್‌ ನಲ್ಲಿ ಬಲ್ನಾಡು ಗ್ರಾಮದ ಉಜಿರ್‌ಪಾದೆ ನಿವಾಸಿ ಶ್ರೀಮತಿ ಕೀರ್ತಿ ಅಖಿಲೇಶ್‌ ಎಂಬವರು ರೂ 2 ಕೋಟಿ ಸಾಲ ಮಾಡಿದ್ದರು.  ಸಾಲ ಮರುಪಾವತಿ ಮಾಡದೇ NPA ಆಗಿದೆ. ಹೀಗಾಗಿ ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ವಕೀಲರ ಮುಖಾಂತರ ಲೀಗಲ್‌ ನೋಟೀಸ್‌ ಮಾಡಿದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರುವುದಿಲ್ಲ.

ಈ ಬಗ್ಗೆ ಮೇಲಾಧಿಕಾರಿಗಳ  ಮೌಖಿಕ ಆದೇಶದಂತೆ, ಚೈತನ್ಯ ಹೆಚ್.ಸಿ  ಅವರು ದಿನಾಂಕ 25.09.2024 ರಂದು ಮಧ್ಯಾಹ್ನ,  ಸಹೋದ್ಯೋಗಿಗಳಾದ ಆಕಾಶ್‌ ಚಂದ್ರಬಾಬು ಮತ್ತು  ಶ್ರೀಮತಿ ದಿವ್ಯಶ್ರೀರವರೊಂದಿಗೆ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಉಜಿರ್‌ಪಾದೆಯಲ್ಲಿರುವ ಶ್ರೀಮತಿ ಕೀರ್ತಿ ಅಖಿಲೇಶ್‌ ರವರ ಮನೆಗೆ ಹೋಗಿದ್ದಾರೆ.  ಮನೆಯಲ್ಲಿದ್ದ ಅರುಣ್‌ ಕಿಶೋರ್‌ ಬ್ಯಾಂಕ್ ಸಿಬ್ಬಂದಿಯನ್ನು ಮನೆ ಒಳಗೆ ಬರಮಾಡಿಕೊಂಡಿರುತ್ತಾರೆ. ಬಳಿಕ ಅಖಿಲೇಶ್‌ ರವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಅಖಿಲೇಶ್‌ ರವರು ಮನೆಗೆ ಬಂದು ಚೈತನ್ಯ ಅವರು  ಮನೆಗೆ ಬಂದ ಬಗ್ಗೆ ತಕರಾರು ತೆಗೆದು ಗದರಿಸಿರುವುದಲ್ಲದೇ, ತಂದೆ ಬರುವ ತನಕ ಕೂರುವಂತೆ  ಮನೆಯ ಬಾಗಿಲು ಹಾಕಿ ಬಲವಂತವಾಗಿ ಕೂರಿಸಿದ್ದಾರೆ.  ಬಳಿಕ ಕೃಷ್ಣ ಕಿಶೋರ್‌ ರವರು  ಕೂಡಾ ಮನೆಗೆ ಬಂದು ಚೈತನ್ಯ ಹೆಚ್.ಸಿ  ಅವರು ಮನೆಗೆ ಬಂದ ಬಗ್ಗೆ ತಕರಾರು ತೆಗೆದು, ಗದರಿಸಿ ಪಿಸ್ತೂಲ್‌ ತೋರಿಸಿ ಶೂಟ್‌ ಮಾಡುತ್ತೇನೆ  ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು   ದಿನಾಂಕ 26.09.2024  ರಂದು ನೀಡಿದ ದೂರಿನ ಮೇರೆಗೆ  ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅ,ಕ್ರ 109/2024, ಕಲಂ:-  ‌ 132, 127(2),351(2),r/w 3(5)ಬಿ.ಎನ್.ಎಸ್ ಮತ್ತು ಕಲಂ  27 ARMS Act ರಂತೆ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!