- Advertisement -
- Advertisement -
ಬಂಟ್ವಾಳ: ಮಾರಾಕಾಸ್ತ್ರ ಪ್ರದರ್ಶಿಸಿ ಸಾರ್ವಜನಿಕರ ಶಾಂತಿ ಭಂಗಗೊಳಿಸುತ್ತಿದ್ದ ಆರೋಪಿಗಳು ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಪರಾರಿಯಾಗಿರುವ ಘಟನೆ ಬಡಗಬೆಳ್ಳೂರು ಎಂಬಲ್ಲಿ ನಡೆದಿದೆ.
ಬಂಟ್ವಾಳ ಬಡಗಬೆಳ್ಳೂರು ಎಂಬಲ್ಲಿ ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಶಾಂತಿಭಂಗಗೊಳಿಸುತ್ತಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಆರೋಪಿಗಳಾದ ಬೋಜರಾಜ,ವಿನೋದ್, ವಿವೇಕ್,ರಕ್ಷಕ್ ಎಂಬವರು ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ರಿಕ್ಷಾವೊಂದು ಪತ್ತೆಯಾಗಿದ್ದು,ಅದರಲ್ಲಿದ್ದ ತಲವಾರನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಲ್ಲದೇ ಪರಾರಿಯಾಗಿರುವವರಿಗೆ ಬಲೆ ಬೀಸಿದ್ದಾರೆ.
- Advertisement -