- Advertisement -
- Advertisement -
ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ್ ರೈ, ಟಾರ್ಗೆಟ್ ಹತ್ಯೆಗಳು ಬಹಳ ಅಪಾಯಕಾರಿ. ಇದು ಕೊನೆಯಾಗಲೇಬೇಕು ಎಂದು ಹೇಳಿದ್ರು.
ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕೃತ್ಯಗಳ ಹಿಂದಿನ ಶಕ್ತಿಗಳನ್ನು ಪತ್ತೆಹಚ್ಚಬೇಕು. ಆಗಷ್ಟೇ ಮುಂದೆ ನಡೆಯುವ ಹತ್ಯೆಗಳನ್ನು ತಡೆಯಬಹುದು ಎಂದರು. ಹಾಗೇ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು. ಇನ್ನು ಪ್ರವೀಣ್ ಕುಟುಂಬಕ್ಕೆ ಗರಿಷ್ಟ ಪರಿಹಾರ ನೀಡಬೇಕು ಎಂದೂ ಆಗ್ರಹಿಸಿದ್ರು.
- Advertisement -