ಉಡುಪಿ: ಹೆಣ್ಣು ಮಕ್ಕಳ ಕನಿಷ್ಠ ವಿವಾಹ ವಯೋಮಿತಿಯನ್ನು ಏಕರೂಪವಾಗಿ ಜಾರಿಗೆ ತಂದರೆ ಮಾತ್ರ ಒಪ್ಪಿಗೆ ಇದೆ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ತೀರ್ಥ ಸರಸ್ವತಿ ಸ್ವಾಮೀಜಿ ಅವರು ವಿವಿಧ ಧರ್ಮದವರ ನಡುವೆ ತಾರತಮ್ಯ ಮಾಡುವುದರ ವಿರುದ್ಧ ಧ್ವನಿ ಎತ್ತಿದ್ದಾರೆ. ಹಿಂದೂಗಳನ್ನು ಏಕೆ ಕಠಿಣವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಹೆಣ್ಣು ಮಕ್ಕಳ ವಿವಾಹದ ಕನಿಷ್ಠ ವಯೋಮಿತಿಯನ್ನು 21ಕ್ಕೆ ಹೆಚ್ಚಿಸುವ ಸರಕಾರದ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಿಯಮ ಹಿಂದೂಗಳಿಗೆ ಮಾತ್ರ ಅನ್ವಯವಾಗುವಂತೆ ಮಾಡಿದರೆ ಸರಿ ಅಲ್ಲ ಎಂದರು .
ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿವಾಹಗಳು ವಿಭಿನ್ನ ಕಾನೂನುಗಳಿಂದ ಆಳಲ್ಪಡುತ್ತವೆ ಎಂದು ಸ್ವಾಮೀಜಿ ತಿಳಿಸಿದರು. “ಮುಸಲ್ಮಾನರ ವಿಷಯದಲ್ಲಿ, 15 ವರ್ಷ ವಯಸ್ಸಿನ ಹುಡುಗಿಯನ್ನು ಮದುವೆಯಾಗಬಹುದು, ಆದರೆ ಹಿಂದೂ ಹುಡುಗಿಯರ ಮದುವೆಯ ವಯಸ್ಸನ್ನು ಮಾತ್ರ ಹೆಚ್ಚಿಸಲಾಗುತ್ತಿದೆ. ಹಾಗೆ ಮಾಡುವ ಮೂಲಕ, ಸರ್ಕಾರವು ಅವರ ನಿರ್ಬಂಧಗಳನ್ನು ಹಿಂದೂಗಳ ಮೇಲೆ ಮಾತ್ರ ಹೇರಲು ಯೋಜಿಸಿದೆ.” ಪರಿಷ್ಕೃತ ಮಾನದಂಡವನ್ನು ಎಲ್ಲಾ ಧರ್ಮಗಳಿಗೂ ಅನ್ವಯಿಸುವಂತೆ ಮಾಡಿದರೆ ಮಾತ್ರ ಮಸೂದೆಯನ್ನು ಬೆಂಬಲಿಸುವುದಾಗಿ ಅವರು ಪ್ರತಿಪಾದಿಸಿದರು.