- Advertisement -
- Advertisement -
ಬೆಂಗಳೂರು:ಕೆಲವು ದಿನಗಳ ಹಿಂದೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಮಾತನಾಡಿರುವ ಆಡಿಯೋ ಭಾರಿ ಸುದ್ದಿಯಾಗಿತ್ತು.ಇದಕ್ಕೆ ಪ್ರತಿಕ್ರಿಯಿಸಿರುವ ಸುಮಲತಾ ತೀವ್ರ ಅಸಮಾಧಾನ ವ್ಯಕ್ತಪಡಿಸಿ”ಅಂಬರೀಶ್ ಇದ್ದಾಗ ಈ ರೀತಿಯಾಗಿ ಮಾತನಾಡಲು ಯಾರಿಗೂ ಧೈರ್ಯವಿರಲಿಲ್ಲ. ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ನಾನು ನನ್ನ ಕ್ಷೇತ್ರದ ಜನರಿಗೆ ಉತ್ತರಿಸಿದರೆ ಸಾಕು ಪಕ್ಕದ ಕ್ಷೇತ್ರದ ಸಂಸದರಿಗೆ ಉತ್ತರ ನೀಡುವ ಅಗತ್ಯ ನನಗಿಲ್ಲ”ಎಂದರು.
“ಸಂಸದರಾಗಿ ಮತ್ತೊಬ್ಬ ಸಂಸದರ ಬಗ್ಗೆ ಹೀಗೆ ಹೇಳಿಕೆ ನೀಡುವುದು ಸರಿಯಲ್ಲ. ಸಂಸದರು ಭಾಷೆಯನ್ನು ಸಮರ್ಪಕ ವಾಗಿ ಬಳಸದೆ ಒಬ್ಬ ಪೇಟೆ ರೌಡಿ ತರ ಮಾತಾನಾಡಿದ್ದಾರೆ. ನನ್ನ ರಿಯಾಕ್ಷನ್ ಗೆ ಅವರಿಗೆ ಅರ್ಹತೆ ಇಲ್ಲವೆಂದು ಝಾಡಿಸಿದರು.ಅರಿತು ಮಾತನಾಡಿದರೆ ಅವರಿಗೆ ಒಳ್ಳೆಯದಾಗುತ್ತದೆ” ಎಂದು ತಿಳಿಸಿದರು.
- Advertisement -