Saturday, May 18, 2024
Homeಅಪರಾಧಬೆಳ್ತಂಗಡಿ:ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ವಿದ್ಯಾರ್ಥಿ ಸಾವು

ಬೆಳ್ತಂಗಡಿ:ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ವಿದ್ಯಾರ್ಥಿ ಸಾವು

spot_img
- Advertisement -
- Advertisement -

ಬೆಳ್ತಂಗಡಿ : ಹಳೆ ರಸ್ತೆ ವನ ಎಂಬಲ್ಲಿ ಇಬ್ಬರು ಗೆಳೆಯರು ಕಾಲೇಜಿಗೆ ಮಧ್ಯಾಹ್ನದ ವರೆಗೆ ರಜೆ ಇದ್ದ ಕಾರಣ ಸ್ನಾನ ಮಾಡಲು ತೆರಳಿದ ವಿದ್ಯಾರ್ಥಿ ಒರ್ವ ಸೋಮವತಿ ನದಿಯಲ್ಲಿ ನೀರುಪಾಲಾಗಿದ್ದಾನೆ.

ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನ ಪ್ರರ್ಥಮ ಪಿಯುಸಿ ವಿದ್ಯಾರ್ಥಿ , ಮೂಲತಃ ಚಿಕ್ಕಮಗಳೂರು ಮೂಲದ ನಿವಾಸಿ ಸಮರ್ಥ್(18) ಸಾವನ್ನಪ್ಪಿದ ವಿದ್ಯಾರ್ಥಿ.

ಬೆಳ್ತಂಗಡಿ ಮೆಸ್ ಒಂದರಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದು ಇಂದು ಮಧ್ಯಾಹ್ನದ ನಂತರ ಕಾಲೇಜ್ ಇದ್ದ ಕಾರಣ ಇನ್ನೊಬ್ಬ ಗೆಳೆಯನ ಜೊತೆ ಸ್ನಾನ ಮಾಡಲು ತೆರಳಿದ್ದಾನೆ , ಗೆಳೆಯ ಪಕ್ಕದಲ್ಲಿ ಇದ್ದು ಸಮರ್ಥ್ ಮಾತ್ರ ನೀರಿಗಿಳಿದ್ದಾನೆ.

ಏಕಾಏಕಿ ನಾಪತ್ತೆಯಾದಾಗ ಬೊಬ್ಬೆ ಹೊಡೆದು ಸ್ಥಳೀಯರಿಗೆ ಮಾಹಿತಿ ನೀಡಿದ್ದು ನಂತರ ಸ್ಥಳೀಯರಾದ ದಾವೂದ್ ಹಾಗೂ ಹಕೀಂ ಎಂಬವರು ಶವ ಮೇಲಕ್ಕೆತ್ತಿದ್ದು ಬೆಳ್ತಂಗಡಿ ಶವಗಾರದಲ್ಲಿ ಇರಿಸಲಾಗಿದೆ.

ಈ ಸುದ್ದಿ ತಿಳಿದ ಶ್ರೀ ಗುರುದೇವ ಕಾಲೇಜಿನ ಅಧ್ಯಕ್ಷ ಹಾಗೂ ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಆಸ್ಪತ್ರೆಗೆ ಬಂದು ಮುಂದಿನ ಕ್ರಮದ ಬಗ್ಗೆ ಸಹಕರಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!