- Advertisement -
- Advertisement -
ಮಂಗಳೂರು; ಬೀದಿ ನಾಯಿಗಳು ಕರುವಿನ ಮೇಲೆ ದಾಳಿ ಮಾಡಿ ಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುರತ್ಕಲ್ ನ ಕಾಟಿಪಳ್ಳದಲ್ಲಿ ನಡೆದಿದೆ.
ಮಂಗಳೂರು ಪಾಲಿಕೆ ವ್ಯಾಪ್ತಿ ಮತ್ತು ಪೆರ್ಮುದೆ ಪಂಚಾಯತ್ ನ ಕುತ್ತೆತ್ತೂರು ಗಡಿ ಭಾಗದ ಈದ್ಗಾ ಬಳಿ ಕರುವೊಂದರ 20 ರಿಂದ 25 ಬೀದಿನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿವೆ.
ಈ ಪ್ರದೇಶದಲ್ಲಿ ಈ ಹಿಂದೆ ಅನಾಧಿಕೃತ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಬಳಿಕ ಸ್ಥಳಿಯರ ಪ್ರತಿಭಟನೆಯಿಂದ ತ್ಯಾಜ್ಯ ಸುರಿಯೋದು ನಿಂತು ಹೋಗಿತ್ತು. ಆದ್ರೆ ಆ ತ್ಯಾಜ್ಯ ಹಾಕುವಾಗ ಬೀಡುಬಿಟ್ಟ ಬೀದಿ ನಾಯಿಗಳು ಇದೀಗ ಅಲ್ಲೇ ಇದ್ದು ಮೊದಲು ಸಿಗುತ್ತಿದ್ದಂತೆ ಆಹಾರ ಸಿಗದೆ ದನಕರುಗಳ ಮೇಲೆ ದಾಳಿ ಮಾಡುತ್ತಿದೆ. ಬೀದಿ ನಾಯಿಗಳ ದಾಳಿ ಭಯದಿಂದ ಜನ ಒಬ್ಬೊಬ್ಬರಾಗಿ ಓಡಾಡಲು ಹಿಂಜರಿಯುತ್ತಿದ್ದಾರೆ. ಇದೀಗ ಈ ಬಗ್ಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ,
- Advertisement -