Wednesday, June 24, 2026
Homeಕರಾವಳಿಮಂಗಳೂರು ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

 ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

- Advertisement -
- Advertisement -

ನೆಲ್ಯಾಡಿ  ಸೂರ್ಯ ನಗರ ಶ್ರೀರಾಮ  ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ   ಸಂಭ್ರಮದಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ  ಪುಟ್ಟ  ಕೃಷ್ಣ  ವೇಷಧಾರಿ  ಮಗುವನ್ನು  ತೊಟ್ಟಿಲಿನಲ್ಲಿ ಮಲಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಕೃಷ್ಣ-ರಾಧೆ  ವೇಷವನ್ನು  ಹಾಕಿ ಸಂಭ್ರಮಿಸಿದರು. ಎಲ್ಲಾ ಕೃಷ್ಣ ರಾಧೆಯರನ್ನು ಕುಣಿತ ಭಜನೆಯೊಂದಿಗೆ ಮೆರವಣಿಗೆ ಮೂಲಕ  ಕರೆತಂದು ಆರತಿ ಎತ್ತಿ ತಿಲಕವನ್ನು  ಇಟ್ಟು  ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಚಿಲಂಪಾಡಿ  ನಿವಾಸಿ ಶ್ರೀಯುತ ದೇವಿ ಪ್ರಸಾದ್ ಅವರು ಶ್ರೀಕೃಷ್ಣನ ಹುಟ್ಟು, ಕೃಷ್ಣ ನ ಬಾಲ್ಯದ   ಲೀಲೆಗಳ ಬಗ್ಗೆ  ವಿವರಿಸಿದರು. ವಿದ್ಯಾಲಯದ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಧರ ಗೋರೆಯವರು ಶ್ರೀ ಕೃಷ್ಣನ ಮಹಿಮೆ, ತುಂಟಾಟಗಳ ಬಗ್ಗೆ   ತಿಳಿಸಿ  ಶುಭ ಹಾರೈಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ  ವಿದ್ಯಾಲಯದ  ಆಡಳಿತ ಮಂಡಳಿ ಕಾರ್ಯದರ್ಶಿ ಮೂಲಚಂದ್ರ ಕಾಂಚನ, ಕನ್ನಡ ಮಾಧ್ಯಮ  ಮುಖ್ಯಶಿಕ್ಷಕ ಗಣೇಶ್  ವಾಗ್ಲೆ ಹಾಗೂ ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಕಾವ್ಯ ಉಪಸ್ಥಿತರಿದ್ದರು. ಸನ್ನಿಧಿ ಸ್ವಾಗತಿಸಿದರು. ಯಶ್ವಿನ್ ವಂದಿಸಿದರು. ನವ್ಯ ಕಾರ್ಯಕ್ರಮ  ನಿರೂಪಿಸಿದರು.  ಬಳಿಕ ವಿದ್ಯಾರ್ಥಿಗಳಿಗೆ ,  ಪೋಷಕರಿಗೆ  ಕೃಷ್ಣಾಷ್ಟಮಿಯ ಪ್ರಯುಕ್ತ  ಮಡಕೆ ಒಡೆಯುವ ಸ್ಪರ್ಧೆಯನ್ನು  ಏರ್ಪಡಿಸಿ  ವಿಜೇತರಿಗೆ  ಬಹುಮಾನ ವಿತರಿಸಲಾಯಿತು.

- Advertisement -

Latest News

error: Content is protected !!