Wednesday, April 24, 2024
Homeತಾಜಾ ಸುದ್ದಿಅಂತಾರಾಷ್ಟ್ರೀಯ ಮಾನವಾಧಿಕಾರ ವೆಲ್ಪೇರ್ ಅಶೋಷಿಯೇಷನ್ ನ ಪರವಾಗಿ ಶೌರ್ಯ ಪತ್ರ ಪ್ರಧಾನ

ಅಂತಾರಾಷ್ಟ್ರೀಯ ಮಾನವಾಧಿಕಾರ ವೆಲ್ಪೇರ್ ಅಶೋಷಿಯೇಷನ್ ನ ಪರವಾಗಿ ಶೌರ್ಯ ಪತ್ರ ಪ್ರಧಾನ

spot_img
- Advertisement -
- Advertisement -

ಪುಣೆ: ನಗರದ ಭಾರತಿ ವಿಧ್ಯಾಪೀಠ ಪೋಲಿಸ್ ಸ್ಟೇಷನ್ ನ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಮಧುರಾ ಕೊರನೆ ಯವರು ಫೆಬ್ರವರಿ 19 ರಂದು ಬೆಳಿಗ್ಗೆ 11.00 ಗಂಟೆಯ ಸಮಯ ಯಾರೋ ಬಿಸಾಡಿದಂತಹ ಒಂದು ದಿನದ ನವಜಾತ ಶಿಶುವನ್ನು ಆಸ್ಪತ್ರೆಗೆ ಕರೆದೊಯ್ದು ಬದುಕಿಸಿದರು. ಮಧುರಾ ಕೊರನೆ ಅವರ ಅತ್ಯುತ್ತಮ ಕೆಲಸಕ್ಕಾಗಿ ಅವರನ್ನು ಅಶೋಷಿಯೇಷನ್ ನ ಪರವಾಗಿ ಸ್ಮರಣಿಕೆ ಹಾಗೂ ಶೌರ್ಯ ಪತ್ರವನ್ನು ಪ್ರಧಾನಿಸಿ ಗೌರವಿಸಲಾಯಿತು.

ಅಂತೆಯೇ ಅವರೊಂದಿಗೆ ಪೊಲೀಸ್ ಇನ್ಸ್ಪೆಕ್ಟರ್ ಸಂಗೀತ ಯಾದವ್ ಅವರಿಗೆ ತೆಂಗಿನಕಾಯಿ ಹಾಗೂ ಪುಷ್ಪಗುಚ್ಚ ನೀಡುವ ಮೂಲಕ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಅಂತರಾಷ್ಟ್ರೀಯ ಮಾನವಾಧಿಕಾರ.ಅಶೋಷಿಯೇಶನ್ ನ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯ ದ ಕಾರ್ಯಾಧ್ಯಕ್ಷರಾದ ರಘುರಾಮ್ ರೈ, ಪುಣೆ ಜಿಲ್ಲಾ ಉಪಾಧ್ಯಕ್ಷ ಯೋಗೇಶ್ ಭಮ್ರೆ, ಪುಣೆ ನಗರ ಅಧ್ಯಕ್ಷ ವಿಶಾಲ್ ನಾಯಕ್ ಮತ್ತು ಧಕ್ಷತಾ ಕಮಿಟಿ ಸದಸ್ಯೆ ಅರ್ಚನಾ ಕಾಕಡೆ ಹಾಗೂ ಭಾರತಿ ವಿಧ್ಯಾಪೀಠ ಪೊಲೀಸ್ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!