- Advertisement -
- Advertisement -
ಉಡುಪಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು ಸರಿಯಲ್ಲ. ಅದು ಬಿಜೆಪಿ ಸಂಸ್ಕೃತಿ ಅಲ್ಲ. ಇಂತಹ ಹೇಳಿಕೆಗಳೆಲ್ಲಾ ಕಾಂಗ್ರೆಸ್ ಸಂಸ್ಕೃತಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಖರ್ಗೆ ಮೋದಿಯನ್ನು ನಿಂದಿಸಿದಕ್ಕಾಗಿ ಬೇಸರದಿಂದ ಯತ್ನಾಳ್ ಹೀಗೆ ಹೇಳಿರಬಹುದು. ಆದ್ರೆ ಇನ್ಮುಂದೆ ಆ ರೀತಿ ಮಾತನಾಡದಂತೆ ಪಕ್ಷ ನೋಡಿಕೊಳ್ಳಲಿದೆ. ಪಕ್ಷದ ಮುಖಂಡರು ಯತ್ನಾಳ್ ಜೊತೆ ಮಾತನಾಡಲಿದ್ದಾರೆ ಎಂದರು.
- Advertisement -