ಚಿಕ್ಕಮಗಳೂರು : ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಕರ್ನಾಟಕ ಸರಕಾರ ರಚನೆ ಮಾಡಿದ ಅಧಿಕೃತ ನಕ್ಸಲ್ ಪುನರ್ ವಸತಿ ಸಮಿತಿಯ ಮೂವರು ಸದಸ್ಯರು ಕಳೆದ ಮೂರು ತಿಂಗಳಿನಿಂದ ಶ್ರಮ ಪಡುತ್ತಿದ್ದರು. ಇವರಿಗೆ ಹಲವರು ಮಂದಿ ಬೆಂಬವಾಗಿ ನಿಂತು ಸಹಕರಿಸಿದ್ದರು. ಕಳೆದ ಒಂದು ತಿಂಗಳಿನಿಂದ ಅದೇ ಸಮಿತಿಯಿಂದ ನಕ್ಸಲ್ ತಂಡವನ್ನು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಕೊನೆಗೂ ಅವರನ್ನೆಲ್ಲಾ ಭೇಟಿ ಮಾಡಿ ಅವರನ್ನು ಮುಖ್ಯವಾಹಿನಿಗೆ ಬರಲು ಮನವೊಲಿಸಿ ಬಂದಿದ್ದರು. ಕೊನೆಗೆ ಆರು ನಕ್ಸಲರು ಮುಖ್ಯವಾಹಿನಿಗೆ ಬರಲು ಒಪ್ಪಿಗೆ ಸೂಚಿಸಿ ನಕ್ಸಲ್ ಪುನರ್ ವಸತಿ ಸಮಿತಿಗೆ ಜ.3 ರಂದು 8 ಪುಟಗಳ ಸ್ವ ಇಚ್ಛೆಯಿಂದ ಹೇಳಿಕೆ ಜೊತೆ ಸಹಿ ಮಾಡಿ ಪತ್ರ ಬರೆದು ಸರಕಾರದ ಮುಂದೆ ಇಟ್ಟು ಇಡೇರಿಸಲು ಬೇಡಿಕೆ ಇಟ್ಟಿದ್ದಾರೆ. ಇದರಿಂದ ಸಮಿತಿ ಜೊತೆ ಸರಕಾರ ಹಾಗೂ ಅಂತರಿಕ ಭದ್ರತಾ ಇಲಾಖೆ ಜೊತೆ ಸೇರಿ ಸಭೆ ನಡೆಸಿ ಅವರ ಬೇಡಿಕೆ ಈಡೇರಿಸುವುದಾಗಿ ಹೇಳಿ ಮುಖ್ಯವಾಹಿನಿಗೆ ಬರಲು ಒಪ್ಪಿಗೆ ಸೂಚಿಸಿದ ಬಳಿಕ ಜ.8 ರಂದು ಬುಧವಾರ ಆರು ಜನ ನಕ್ಸಲರನ್ನು ಮತ್ತು ಅವರ ಬಳಿ ಇರುವ ಬಂದೂಕುಗಳನ್ನು ಚಿಕ್ಕಮಗಳೂರು ಡಿಸಿ ಕಚೇರಿಯಲ್ಲಿ ಶರಣಾಗತಿ ಮಾಡಿಸುತ್ತಿದ್ದಾರೆ.

ಈ ನಡುವೆ ಕೆಲ ದಿನಗಳಿಂದ ಅಧಿಕೃತ ಅಲ್ಲದ ಸ್ವಯಂ ಘೋಷಿತ ವೇದಿಕೆ ಹೆಸರಲ್ಲಿ ನಕ್ಸಲರ ಶರಣಾಗತಿ ಮಾಡುವ ಬಗ್ಗೆ ತಮ್ಮ ವೇದಿಕೆಯ ಹೆಸರಲ್ಲಿ ಪ್ರಚಾರ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ರೀತಿ ಪ್ರಚಾರ ಪಡೆಯುವುದು ಸರಿಯಲ್ಲ ಎಂದು ಅಧಿಕೃತ ನಕ್ಸಲ್ ಪುನರ್ ವಸತಿ ಸಮಿತಿ ಸದಸ್ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಕ್ಸಲ್ ಪುನರ್ ವಸತಿ ಸಮಿತಿಯನ್ನು ಕರ್ನಾಟಕ ಸರಕಾರ 2024 ಜನವರಿಯಲ್ಲಿ ಅಧಿಕೃತವಾಗಿ ರಚಿಸಿದ್ದು.ಈ ಸಮಿತಿಯಲ್ಲಿ ಮೂವರು ಸದಸ್ಯರಾಗಿ ಕೆ. ಪಿ. ಶ್ರೀಪಾಲ್,ಡಾ. ಬಂಜಗೆರೆ ಜಯಪ್ರಕಾಶ್, ಪಾರ್ವತೀಶ ಬಿಳಿದಾಳೆ ಇದ್ದಾರೆ. ಈ ಸಮಿತಿಯವರೆ ಆರು ಜನ ನಕ್ಸಲರು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದು, ಇವರಿಗೆ ಇತರರು ಕೂಡ ಸಹಕಾರ ನೀಡಿದ್ದಾರೆ ಎನ್ನಲಾಗಿದೆ.