Tuesday, May 14, 2024
Homeಕರಾವಳಿಉಡುಪಿಹಿರ್ಗಾನ: ಮನ ಶಾಂತಿ ನೀಡುವ ಏಕೈಕ ಸಾಧನ ಪುಸ್ತಕಗಳ ಅಧ್ಯಯನ: ಕೇಮಾರು ಶ್ರೀ

ಹಿರ್ಗಾನ: ಮನ ಶಾಂತಿ ನೀಡುವ ಏಕೈಕ ಸಾಧನ ಪುಸ್ತಕಗಳ ಅಧ್ಯಯನ: ಕೇಮಾರು ಶ್ರೀ

spot_img
- Advertisement -
- Advertisement -

ಹಿರ್ಗಾನ: ಬಡವರ, ನೊಂದವರ ಕಣ್ಣೀರು ಒರೆಸುವುದೇ ನಿಜವಾದ ಆಧ್ಯಾತ್ಮ. ಇಂದು ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗ್ತಿದೆ. ಇದಕ್ಕೆ ಕಾರಣ ಆತ್ಮಶಕ್ತಿ ಕಡಿಮೆಯಾಗ್ತಿರೋದು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ತಿಳಿಸಿದ್ದಾರೆ.

ಕಾರ್ಕಳ ತಾಲೂಕು ಹಿರ್ಗಾನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಸಾಮೂಹಿಕ ಸತ್ಯ ನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಆಶೀರ್ವಚನ ನೀಡಿದರು. ಈ ವೇಳೆ ಧಾರ್ಮಿಕ ಶಿಕ್ಷಣದ ಕೊರತೆಯಿಂದಲೇ ಆತ್ಮಶಕ್ತಿ ಕಡಿಮೆಯಾಗ್ತಿದೆ. ಆತ್ಮಹತ್ಯೆ ನಿಗ್ರಹಕ್ಕಾಗಿ ಪುಸ್ತಕಗಳ ಅಧ್ಯಯನ ಮಾಡಬೇಕು. ಇದರಿಂದ ಮನಶಾಂತಿ ಸಿಗಲಿದೆ ಎಂದರು.

ವೇದಿಕೆಯಲ್ಲಿ ಯೋಜನಾಧಿಕಾರಿ ಭಾಸ್ಕರ್, ಸತ್ಯ ನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಸಿರಿಯಣ್ಣ ಶೆಟ್ಟಿ, ವಾಸು ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೇಲ್ವಿಚಾರಕರು ಗೀತಾ ಕಾರ್ಯಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!