- Advertisement -
- Advertisement -
ಬೆಳ್ತಂಗಡಿ: ತಾಲೂಕಿನ ಶಿಬಾಜೆ ಗ್ರಾಮದ ತುಂಬೆತ್ತಡ್ಡ ಎಂಬಲ್ಲಿ ರಬ್ಬರ್ ತೋಟದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಪಿಎಸ್ಐ ಪವನ್ ನಾಯಕ್ ನೇತೃತ್ವದ ಧರ್ಮಸ್ಥಳ ಪೊಲೀಸರ ತಂಡ ದಾಳಿ ನಡೆಸಿ ಓವ೯ ಆರೋಪಿಯನ್ನು ಬಂಧಿಸಿದ್ದಾರೆ.
ಸ್ಥಳೀಯ ಬಜರಂಗದಳದ ಕಾರ್ಯಕರ್ತರ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಒಬ್ಬ ಆರೋಪಿ ತೋಮಸ್ ಯಾನೆ ಸನ್ನಿ ಎಂಬಾತನನ್ನು ಬಂಧಿಸಲಾಗಿದೆ. ಸುಮಾರು 75 ಕೆಜಿ ಯಷ್ಟು ದನದ ಮಾಂಸ ಮತ್ತು ಇತರ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗೆ ಜಾಮೀನು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ Crime no 30/21 ಅಡಿಯಲ್ಲಿ ದಾಖಲಾಗಿದ್ದ ದೂರಿನ ಆರೋಪಿ ತೋಮಸ್ ಯಾನೆ ಸನ್ನಿಗೆ ಜಾಮೀನು ದೊರಕಿದೆ. ಬೆಳ್ತಂಗಡಿಯ ನ್ಯಾಯವಾದಿಗಳಾದ ನವೀನ್ ಬಿಕೆ ಹಾಗೂ ಆನಂದಕುಮಾರ್ ಎಂಸಿ ಇವರು ಆರೋಪಿ ಪರ ವಕಾಲತ್ತು ವಹಿಸಿ ಆರೋಪಿಯನ್ನು ಜಾಮೀನಿನ ಮುಖಾಂತರ ಬಿಡುಗಡೆಗೊಳಿಸಿದ್ದಾರೆ
- Advertisement -