Sunday, June 29, 2025
Homeಕರಾವಳಿಶರತ್ ಮಡಿವಾಳ ಕೊಲೆ ಆರೋಪಿ ಶರೀಫ್ ಮೇಲೆ ಕೊಲೆಗೆ ಯತ್ನಕ್ಕೆ ಹೊಸ ಟ್ವಿಸ್ಟ್ !

ಶರತ್ ಮಡಿವಾಳ ಕೊಲೆ ಆರೋಪಿ ಶರೀಫ್ ಮೇಲೆ ಕೊಲೆಗೆ ಯತ್ನಕ್ಕೆ ಹೊಸ ಟ್ವಿಸ್ಟ್ !

spot_img
- Advertisement -
- Advertisement -

ಬಂಟ್ವಾಳ: ಸಜೀಪ ಮುನ್ನೂರು ನಿವಾಸಿ, ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ಬಿ.ಸಿ.ರೋಡ್ ಉದಯ ಲಾಂಡ್ರಿ ಮಾಲಕ ಶರತ್ ಮಡಿವಾಳರ ಕೊಲೆ ಆರೋಪಿ ಶರೀಫ್ ಎಂಬಾತನ ಮೇಲೆ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ ಎಂಬ ಸುದ್ದಿಗೆ ಹೊಸ ತಿರುವು ಸಿಕ್ಕಿದೆ.

ಆಲಂಪಾಡಿ ಶಾರದಾ ನಗರದ ನಿವಾಸಿಯಾದ ಶರೀಫ್ ಮನೆಯಿಂದ ಮಧ್ಯಾಹ್ನ 12.30 ಗಂಟೆಗೆ ತನ್ನ ಸ್ವಂತ ಬೈಕ್ ನಲ್ಲಿ ಮಸೀದಿಗೆ ತೆರಳುವ ಸಮಯ ಎದುರು ಬಂದ ಬೈಕ್ ಒಂದಕ್ಕೆ ಅಪಘಾತ ವಾಗಿದ್ದು ಆ ಸಮಯ ಶರೀಫ್ ಮತ್ತು ಬೈಕ್ ನವರಿಗೆ ಗಲಾಟೆಯಾಗಿದ್ದು ನಂತರ ಬೈಕ್ ನಲ್ಲಿ ಬಂದ ವ್ಯಕ್ತಿಗಳು ಅಲ್ಲಿಂದ ಹೋಗಿದ್ದಾರೆ ಎನ್ನಲಾಗಿದೆ.

ಒಂದು ಚಿಕ್ಕ ಅಪಘಾತವನ್ನು ಕೊಲೆ ಯತ್ನ ಎಂಬುವುದಾಗಿ ಬಿಂಬಿಸುತ್ತಿರುವ ಸಂಗತಿ ಸಾರ್ವಜನಿಕರಲ್ಲಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಅದಲ್ಲದೆ ಆಲಂಪಾಡಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಮತ್ತು ಯಾವಾಗಲೂ ಜನ ಓಡಾಡುವ ರಸ್ತೆಯಲ್ಲಿ ಶರೀಫ್ ನಿಗೆ ಮತ್ತು ಇನ್ನೊಂದು ಬೈಕ್ ನವರಿಗೆ ಅಪಘಾತವಾಗಿ ಗಲಾಟೆಯಾದರು ಯಾರೋಬ್ಬರು ನೋಡಿರುವುದಿಲ್ಲ. ಮುಸ್ಲಿಂ ಏರಿಯಾದಲ್ಲಿ ಶರೀಫ್ ಮೇಲೆ ಕೊಲೆಗೆ ಯತ್ನ ಮಾಡಬಹುದಾ? ಇಲ್ಲವೇ ಇದೊಂದು ಕೃತಕವಾಗಿ ಸೃಷ್ಟಿ ಮಾಡಿದ ಅಪಘಾತವೇ ಎಂಬ ಅನುಮಾನ ಸಾರ್ವಜನಿಕರಲ್ಲಿ ದಟ್ಟವಾಗಿವಾಗುತ್ತಿದೆ.

- Advertisement -
spot_img

Latest News

error: Content is protected !!