- Advertisement -
- Advertisement -
ಬಂಟ್ವಾಳದ ಎಸ್.ವಿ. ಎಸ್ ಕಾಲೇಜು ವಿದ್ಯಾರ್ಥಿ ಶಪುನ್ ಪೂಂಜ, ಬಿ. ಸಿ. ಎ ಪದವಿ ಮುಗಿಸಿದ ಬಳಿಕ ಎಂ ಸಿ ಎ ಪದವಿ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪಿಜಿ ಸಿ ಇ ಟಿ ಪರೀಕ್ಷೆಯಲ್ಲಿ ರಾಜ್ಯಕ್ಕೇ 9 ನೇ ಸ್ಥಾನ ಪಡೆದಿರುತ್ತಾರೆ.
ವರ್ಷಂಪ್ರತಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪದವಿ ನಂತರದ ಎಮ್ ಟೆಕ್, ಎಮ್ ಸಿ ಎ ಮುಂತಾದ ಉನ್ನತ ವ್ಯಾಸಂಗ ಮಾಡಲಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ, ಪಿಜಿ ಸಿ.ಇ.ಟಿ ಆಯೋಜಿಸುತ್ತದೆ, ಅದೇ ರೀತಿ ಈ ವರ್ಷವೂ ಪರೀಕ್ಷೆ ಆಯೋಜಿಸಿದ್ದು ಸಾವಿರಾರು ಮಂದಿ ವಿದ್ಯಾರ್ಥಿಗಳು ಅದೃಷ್ಟ ಪರೀಕ್ಷೆ ಮಾಡಿದ್ದರು.
ಖಾಸಾಗಿ ಕಂಪನಿಯಲ್ಲಿ ನೌಕರರಾಗಿ ದುಡಿಯುತ್ತಿರುವ ಬಡಗಬೆಳ್ಳೂರು ಗ್ರಾಮದ ಅತಿಕಾರಹಿತ್ಲು, ಸುರೇಶ್ ಪೂಂಜರ ಪುತ್ರ ಶಪುನ್ ಪೂಂಜ ಈ ಬಾರಿ ಟಾಪ್ ೧೦ ರಾಂಕ್ನಲ್ಲಿ ಸ್ಥಾನ ಪಡೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
- Advertisement -