ಮಂಗಳೂರು; ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಎಸ್ ಡಿಪಿಐಯ 2ನೇ ಪಟ್ಟಿಯನ್ನು ಎಸ್ಡಿಪಿಐ ಅಧ್ಯಕ್ಷರು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯ ಆರೋಪಿ ಶಾಫಿ ಬೆಳ್ಳಾರೆ ಅವರಿಗೆ ಟಿಕೆಟ್ ನೀಡಲಾಗುತ್ತಿದೆ. ಆ ಮೂಲಕ ಶಾಫಿ ಬೆಳ್ಳಾರೆ ಸ್ಪರ್ಧೆ ಖಚಿತವಾಗಿದೆ.
ಈ ಹಿಂದೆ ಜನವರಿ ತಿಂಗಳಲ್ಲಿ ಮೊದಲ ಪಟ್ಟಿಯಲ್ಲಿ ಒಟ್ಟು 10 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಇಂದು ಎರಡನೇ ಪಟ್ಟಿಯಲ್ಲಿ ಒಟ್ಟು 9 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇಂದಿನ ಒಂಭತ್ತು ಅಭ್ಯರ್ಥಿಗಳ ಪಟ್ಟಿಯಲ್ಲಿ ಇಬ್ಬರು ಹಿಂದೂ ಧರ್ಮೀಯರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಒಟ್ಟು 43 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಖಚಿತವಾಗಿದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದು, ಮತ್ತೊಂದು ಪಟ್ಟಿಯಲ್ಲಿ ಉಳಿದವರ ಹೆಸರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
2023 ಕರ್ನಾಟಕ ವಿಧಾನಸಭಾ ಚುನಾವಣೆ SDPI ಆಭ್ಯರ್ಥಿಗಳ 2ನೇ ಪಟ್ಟಿ ಹೀಗಿದೆ..
• ಮಡಿಕೇರಿ (ಕೊಡಗು) ಅಮೀನ್ ಮೊಹಸಿನ್
• ರಾಯಚೂರು (ರಾಯಚೂರು) ಸಯ್ಯದ್ ಇಸಾಗಕ್ ಹುಸೇನ್
• ತೇರದಾಳ (ಬಾಗಲಕೋಟ) ಯಮುನಪ್ಪಾ ಗುಣದಾಲ್
• ಮೂಡಿಗೆರೆ (ಎಸ್ ಸಿ) ಚಿಕ್ಕಮಗಳೂರು ಅಂಗಡಿ ಚಂದ್ರು
• ಬಿಜಾಪುರ ನಗರ (ವಿಜಯಪುರ) ಅಥಾವುಲ್ಲಾಹ್ ದ್ರಾಕ್ಷಿ
• ಮಂಗಳೂರು (ದಕ್ಷಿಣ ಕನ್ನಡ) ರಿಯಾಜ್ ಫರಂಗಿಪೇಟೆ
• ಗುಲ್ಬರ್ಗ ಉತ್ತರ (ಕಲಬುರಗಿ) ರಹೀಮ್ ಪಟೇಲ್
• ಪುತ್ತೂರು (ದಕ್ಷಿಣ ಕನ್ನಡ) ಶಾಫಿ ಬೆಳ್ಳಾರೆ
• ಹುಬ್ಬಳ್ಳಿ ಪೂರ್ವ (ಧಾರವಾಡ) ಡಾ.ವಿಜಯ ಎಂ. ಗುಂಟ್ರಾಲ್