ಸವಣಾಲು :ಶಾಸಕ ಹರೀಶ್ ಪೂಂಜಾ ಅವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮೇಲಂತಬೆಟ್ಟು ಗ್ರಾ.ಪಂ.ವ್ಯಾಪ್ತಿಯ ಸವಣಾಲು ಗ್ರಾಮದ ಬೂತ್ ಸಂಖ್ಯೆ 11 ಮತ್ತು 12 ರ ಸಮಿತಿಯ ಅಧ್ಯಕ್ಷರುಗಳಾದ ಅಂಗಾರದೊಟ್ಟು ಲೋಕನಾಥ ಶೆಟ್ಟಿ ಮತ್ತು ದೇವಸ ನಾರಾಯಣ ಗೌಡ ಅವರ ಮನೆಗೆ ಅಕ್ಟೋಬರ್ 1 ಶುಕ್ರವಾರದಂದು ಬೇಟಿ ನೀಡಿ ನಾಮಫಲಕ ಅನಾವರಣಗೊಳಿಸಿದರು.
ಈ ಸಂಧರ್ಭದಲ್ಲಿ ಶಾಸಕ ಹರೀಶ್ ಪೂಂಜಾ ಅವರು ಕಾರ್ಯಕರ್ತರ ಸಂಘಟನೆಗೆ ಪೂರಕವಾದ ರೀತಿಯಲ್ಲಿ ಕಾರ್ಯಕ್ರಮ ವನ್ನು ಪಕ್ಷದ ನಾಯಕರು ಹಮ್ಮಿಕೊಂಡಿದ್ದು , ನಿಮ್ಮ ಜೊತೆ ನಿರಂತರವಾಗಿ ನಾವು ಇದ್ದೇವೆ ಎಂದು ಧೈರ್ಯ ತುಂಬುವ ಮಾತುಗಳನ್ನಾಡಿದರು.
ಈ ಬಾರಿ ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸವಣಾಲು ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಮಲ್ಲಿಕ ಎಂ.ಕೆ ಮತ್ತು ರಕ್ಷೀತ್ ಶೆಟ್ಟಿ ಇವರಿಗೆ ಬೂತ್ ಸಂಖ್ಯೆ 11 ಅಧ್ಯಕ್ಷರ ಮನೆಗೆ ನಾಮಪಲಕ ಆವಳಡಿಕೆ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಅವರು ಕಾರ್ಯಕರ್ತರು ಹಾಗೂ ಗಣ್ಯರ ಸಮ್ಮುಖ ಅಭಿನಂದನೆ ಸಲ್ಲಿಸಿ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರ , ಮಂಡಲದ ಉಪಾಧ್ಯಕ್ಷ ಸೀತಾರಾಮ ಬೆಳಾಲು. ಮಂಡಲ ಕಾರ್ಯದರ್ಶಿ ಆನಂದ ಪೂಜಾರಿ ಒಡಿಮಾರ್ , ಹಿಂದುಳಿದ ಮೋರ್ಚಾದ ಮಂಡಲ ಅಧ್ಯಕ್ಷ ಪ್ರಭಾಕರ ಆಚಾರ್ಯ , ಮಹಾಶಕ್ತಿಕೇಂದ್ರ ದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು , ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಗೌಡ ದೇವಸ , ಪಂಚಾಯತ್ ಅಧ್ಕಕ್ಷೆ ಕುಮಾರಿ ಹರಿಣಾಕ್ಷಿ , ಪಂಚಾಯತ್ ನ ಸದಸ್ಯರುಗಳಾದ ಶ್ರೀಮತಿ ಜಯಲಕ್ಷ್ಮಿ ,ಶ್ರೀಮತಿ ಸುಮಲತಾ , ಸಿ.ಎ ಬ್ಯಾಂಕ್ ನಿರ್ದೇಶಕ ಗಣೇಶ್ ಭಂಡಾರಿ, ಹಾಲು ಉತ್ಪಾಧಕರ ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ ಕಂಬಳದಡ್ಡ , ಯುವ ಮೋರ್ಚ ಸಂಚಾಲಕ ಶಿತೇಶ್ ಗೌಡ ದೇವಸ, ರೈತ ಮೋರ್ಚಾ ದ ಸಂಚಾಲಕ ನಾರಾಯಣ ಶೆಟ್ಟಿ ಸೇರಿದಂತೆ ಕಾರ್ಯಕರ್ತರು ಹಾಗೂ ವಿವಿಧ ಮೋರ್ಚಾದ ಸಂಚಾಲಕರು ಉಪಸ್ಥಿತರಿದ್ದರು.