Saturday, May 18, 2024
Homeಕರಾವಳಿಸರ್ಕಾರದ ಮುಖ್ಯ ಸಚೇತಕ ಹುದ್ದೆಗೆ ಸಂಜೀವ ಮಠಂದೂರು ನೇಮಕಾತಿ ಸಾಧ್ಯತೆ...!

ಸರ್ಕಾರದ ಮುಖ್ಯ ಸಚೇತಕ ಹುದ್ದೆಗೆ ಸಂಜೀವ ಮಠಂದೂರು ನೇಮಕಾತಿ ಸಾಧ್ಯತೆ…!

spot_img
- Advertisement -
- Advertisement -

ಪುತ್ತೂರು: ಬೆಂಗಳೂರಿನಲ್ಲಿಂದು ವಿಧಾನ ಸಭೆ ಅಧಿವೇಶನ ಆರಂಭಗೊಳ್ಳಲಿದ್ದು ಅದಕ್ಕೂ ಮುನ್ನಸರ್ಕಾರದ ಮುಖ್ಯ ಸಚೇತಕ ಹುದ್ದೆಗೆ ಆಯ್ಕೆ ನಡೆಯುವ ಸಾಧ್ಯತೆಯಿದ್ರೂ ಈ ಸ್ಥಾನ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಲಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸ .13 ರಿಂದ ಬೆಂಗಳೂರಿನಲ್ಲಿ ವಿಧಾನ ಸಭೆ ಅಧಿವೇಶನ ಆರಂಭಗೊಳ್ಳಲಿದೆ. ಆರು ತಿಂಗಳ ಬಳಿಕ ಹಾಗೂ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ, ಈ ಅಧಿವೇಶನ ನಡೆಯಲಿದೆ ಅದಕ್ಕೂ ಮೊದಲು ಬಿಜೆಪಿ ಶಾಸಕಾಂಗ ಸಭೆ ನಡೆಯುವ ನಿರೀಕ್ಷೆಯಿದೆ. ಸಭೆಯಲ್ಲಿ ಅಥಾವ ಸಭೆಯ ಬಳಿಕ ಅಧಿವೇಶನ ಆರಂಭಕ್ಕೂ ಮೊದಲು ಸರ್ಕಾರದ ಮುಖ್ಯ ಸಚೇತಕ ಹುದ್ದೆಗೆ ನೇಮಕ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಸರ್ಕಾರದ ಮುಖ್ಯ ಸಚೇತಕ ಹುದ್ದೆಗೆ ಆಡಳಿತ ಪಕ್ಷದ ಶಾಸಕರೊಬ್ಬರು ನೇಮಕವಾಗಲಿದ್ರೂ ಆ ಸ್ಥಾನ ಮತ್ತೆ ಕರಾವಳಿ ಕರ್ನಾಟಕದ ಪಾಲಾಗುವ ಸಾಧ್ಯತೆ ಅಧಿಕ. ಈ ಹಿಂದೆ ಈ ಹುದ್ದೆಯಲ್ಲಿದ್ದ ಕರಾವಳಿ ಜಿಲ್ಲೆಯವರೇ ಆದ ಎ.ಸುನೀಲ್‌ಕುಮಾರ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಚಿವರಾಗಿದ್ದಾರೆ. ಇದರಿಂದ ಹುದ್ದೆ ಖಾಲಿಯಾಗಿದ್ದು, ಹೊಸೊಬ್ಬರನ್ನು ಆಯ್ಕೆ ಮಾಡಬೇಕಿದೆ. ಸೋಮವಾರ ನಡೆಯುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಭದ್ರಕೋಟೆ ಎನಿಸಿರುವ ಕರಾವಳಿ ಜಿಲ್ಲೆಯಲ್ಲಿ ಒಟ್ಟು 13 ವಿಧಾನ ಸಭೆ ಸ್ಥಾನಗಳಿದ್ದು, ಆ ಪೈಕಿ 12 ಸ್ಥಾನ ಬಿಜೆಪಿ ಪಾಲಾಗಿದೆ . ದ.ಕ ಹಾಗೂ ಉಡುಪಿ ಜಿಲ್ಲೆಯಿಂದ ಒಟ್ಟು ಮೂವರು ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ಹಾಗೂ ಉಡುಪಿ ಸಂಸದೆ ಕೇಂದ್ರ ಸಂಪುಟದಲ್ಲಿ ಸಚಿವೆಯಾಗಿದ್ದು , ಮಂಗಳೂರು ಸಂಸದರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಇನ್ನೂ ಒಂದು ಮಹತ್ವದ ಹುದ್ದೆ ಸರ್ಕಾರದ ಮುಖ್ಯ ಸಚೇತಕನ ನೆಲೆಯಲ್ಲಿ ಕರಾವಳಿ ಗೆ ದೊರಕಲಿದೆ ಎನ್ನಲಾಗುತ್ತಿದೆ.

- Advertisement -
spot_img

Latest News

error: Content is protected !!