- Advertisement -
- Advertisement -
ಬೆಳ್ತಂಗಡಿ; ವಕೀಲರ ಸಂಘ ರಿ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಶ್ರೀ ಮಂಜು ಇಂಡೇನ್ ಗ್ಯಾಸ್ ಬೆಳ್ತಂಗಡಿ ವತಿಯಿಂದ ವಕೀಲರ ಭವನದಲ್ಲಿ ಸೇಫ್ಟಿ ಕ್ಲಿನಿಕ್ ಕಾರ್ಯಾಗಾರ ನಡೆಯಿತು.
ಈ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಬೆಳ್ತಂಗಡಿ ಶ್ರೀಮಂಜು ಇಂಡಿಯನ್ ಗ್ಯಾಸ್ ಇದರ ಶಿವಕುಮಾರ್ ಇವರು ಸವಿವರ ಮಾಹಿತಿಯನ್ನು ನೀಡಿದರು.ರಿಜಿನಲ್ ಮ್ಯಾನೇಜರ್ ಆದ ಗೀತಾ ಮೋಹನ್ ಇವರು ಗ್ಯಾಸ್ ಉಪಯೋಗದ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಗಾರದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ಇವರು ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ಮಂಜು ಇಂಡಿಯನ್ ಗ್ಯಾಸ್ ವತಿಯಿಂದ ಸೇಫ್ಟಿ ಉಪಕರಣಗಳನ್ನು ವಿತರಿಸಲಾಯಿತು
- Advertisement -