Sunday, June 29, 2025
Homeಕರಾವಳಿಉಡುಪಿಕಾರ್ಕಳದ ಕಾರ್ಲ ಕಜೆ ಭತ್ತದ ಡಿಎನ್‌ಎ ಸಂಶೋಧನೆ ನಡೆಯಬೇಕು: ಬಿ.ಸಿ.ಪಾಟೀಲ್‌

ಕಾರ್ಕಳದ ಕಾರ್ಲ ಕಜೆ ಭತ್ತದ ಡಿಎನ್‌ಎ ಸಂಶೋಧನೆ ನಡೆಯಬೇಕು: ಬಿ.ಸಿ.ಪಾಟೀಲ್‌

spot_img
- Advertisement -
- Advertisement -

ಉಡುಪಿ: ಇಲ್ಲಿನ ಕಾರ್ಕಳದಲ್ಲಿ ‘ಕಾರ್ಲ ಕಜೆ’ ಕುಚ್ಚಲಕ್ಕಿ ಬ್ರಾಂಡ್‌ ಬಿಡುಗಡೆ ಕಾರ್ಯಕ್ರಮ ನಡೆಯಿತು.’ಕಾರ್ಲ ಕಜೆ’ ಕುಚ್ಚಲಕ್ಕಿ ಬಿಡುಗಡೆ ಮಾಡಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಕಾರ್ಕಳದ ಕಾರ್ಲ ಕಜೆ ಭತ್ತವನ್ನು ಸಂಶೋಧನೆಗೊಳಪಡಿಸಬೇಕು ಎಂದರು. ಭತ್ತದ ವೈಶಿಷ್ಟತೆಯ ಆಧಾರದ ಮೇಲೆ ಪ್ರಮಾಣಪತ್ರ ಪಡೆಯಲು ಕ್ರಮ ವಹಿಸಬೇಕು ಎಂದು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿಗೆ ‌ಅವರು ಈ ವೇಳೆ ಸೂಚನೆ ನೀಡಿದರು.

ಕರಾವಳಿಯ ಹೆಮ್ಮೆಯಾಗಿ ಕಾರ್ಕಳ ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಕಾರ್ಲ ಕಜೆ ಭತ್ತದ ತಳಿಯಲ್ಲಿ ನಾರಿನಂಶ, ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಭತ್ತದ ಡಿಎನ್‌ಎ ಸಂಶೋಧನೆ ನಡೆಯಬೇಕು. ಸರ್ಕಾರದ ಎಂಎಸ್‌ಪಿ ಯೋಜನೆಯಡಿ ಭತ್ತವನ್ನು ಸೇರ್ಪಡೆಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿ ರೈತರು ಕೃಷಿ ಚಟುವಟಿಕೆಯಲ್ಲಿ ಹೆಕಾಗಿ ತೊಡಗಿಸಿಕೊಳ್ಳಲು ಕರೆ ನೀಡಿದರು.

- Advertisement -
spot_img

Latest News

error: Content is protected !!