Sunday, June 29, 2025
Homeಕರಾವಳಿಕೊರೋನಾ ಸಂಕಷ್ಟದಲ್ಲಿ ಆಸರೆಗಾಗಿ ಖಾಸಗಿ ಬಸ್ ನೌಕರರ ಸಂಘದಿಂದ ಸರಕಾರಕ್ಕೆ ಮನವಿ

ಕೊರೋನಾ ಸಂಕಷ್ಟದಲ್ಲಿ ಆಸರೆಗಾಗಿ ಖಾಸಗಿ ಬಸ್ ನೌಕರರ ಸಂಘದಿಂದ ಸರಕಾರಕ್ಕೆ ಮನವಿ

spot_img
- Advertisement -
- Advertisement -

ಬೆಳ್ತಂಗಡಿ: ಲಾಕ್ಡೌನ್ ಘೋಷಿಸಿದ್ದರಿಂದ ದಿನಗೂಲಿ ಕಾರ್ಮಿಕರಾಗಿ ದುಡಿಯುವ ಖಾಸಗಿ ಬಸ್ ನೌಕರರು ಸಂಕಷ್ಟಕ್ಕೆ ಸಿಲುಕಿರುವುದರಿಂದ ರಾಜ್ಯ ಸರಕಾರವು ಸೂಕ್ತ ಪರಿಹಾರ ಸೌಲಭ್ಯ ಒದಗಿಸಬೇಕು ಎಂದು ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಖಾಸಗಿ ಬಸ್ ನೌಕರರ ಸಂಘವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ಬೆಳ್ತಂಗಡಿ ಮಿನಿವಿಧಾನಸೌಧದಲ್ಲಿ ಶುಕ್ರವಾರ ಶುಕ್ರವಾರ ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಖಾಸಗಿ ಬಸ್ಗಳ ಸಂಚಾರವು ಮೇ 15ರ ನಂತರವೂ ಅಸಾಧ್ಯ. ಇದರಿಂದ ದಿನಗೂಲಿಗೆ ದುಡಿಯುವ ಖಾಸಗಿ ಬಸ್ಸಿನ ಚಾಲಕ, ನಿರ್ವಾಹಕರು ಸಂಬಳವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಹೆಚ್ಚಿನ ಕೆಲವು ನೌಕರರು 3 ಸೆನ್ಸ್ ಜಾಗ ಅಥವಾ ಬಾಡಿಗೆ ಕೊಠಡಿಗಳಲ್ಲಿ ಜೀವನ ಸಾಗಿಸುವರು ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದಾರೆ.

ಬಸ್ ಸಿಬಂದಿಗಳಲ್ಲಿ ಬಹುತೇಕ ಮಂದಿ ಬಡವರಾಗಿದ್ದು ದಿನದ ಸಂಪಾದನೆ ಆದರೆ ಮಾತ್ರ ಮನೆಗೆ ಆಹಾರ ಸಾಮಗ್ರಿ ಖರೀದಿಸಲು ಸಾಧ್ಯ. ಆದ್ದರಿಂದ ನಮ್ಮ ಸಂಕಷ್ಟಕ್ಕೆ ಸರಕಾರದಿಂದ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಖಾಸಗಿ ಬಸ್ ನೌಕರರು, ಸಿಬಂದಿ ವರ್ಗ ಪತ್ರದಲ್ಲಿ ಮನವಿ ಮಾಡಿದೆ.

ಈ ಸಂದರ್ಭ ಖಾಸಗಿ ಬಸ್ ನೌಕರರ ಸಂಘದ ಅಧ್ಯಕ್ಷ ಸಿದ್ದಿಕ್ ಕೆಂಪಿ, ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಪ್ರಧಾನ ಕಾರ್ಯದರ್ಶಿ ದೀಪಕ್ ಜಿ., ಕೋಶಾಧಿಕಾರಿ ಇಲಿಯಾಸ್ ಕರಾಯ, ಸದಸ್ಯರಾದ ಮನ್ಸೂರ್, ಚಿದಾನಂದ ಸಾಲಿಯಾನ್, ಶರೀಫ್ ರಿಯಾಜ್ ಮತ್ತಿತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!