- Advertisement -
- Advertisement -
ಸುಳ್ಯ: ತಾಲೂಕಿನ ಬಾಳಿಲ ಗ್ರಾಮದ ನಿವಾಸಿ ಅಬ್ದುಲ್ಲಾ ರವರ ಶೇಡ್ ಗೆ ದಾಳಿ ನಡೆಸಿರುವ ಬೆಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಚಿಕ್ಕಮಗಳೂರು ಪಿಎಸ್ಐ ಆರ್.ಶೋಭಾ ಮತ್ತು ಸಿಬ್ಬಂದಿಗಳು ಅಕ್ರಮವಾಗಿ ದಾಸ್ತಾನು ಮಾಡಿದ್ದ ರಕ್ತ ಚಂದನದ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯ ಸಮಯದಲ್ಲಿ 40 ತುಂಡುಗಳನ್ನು(ಇದರ ಒಟ್ಟು ತೂಕ 260 ಕೆ.ಜಿ) ವಶಪಡಿಸಿಕೊಂಡು ಆರೋಪಿಗಳಾದ ಅಬ್ದುಲ್ಲಾ (51) ಮತ್ತು ಹಮೀದ್(47) ವರ್ಷ ಇವರನ್ನು ಬಂಧಿಸಿದ್ದಾರೆ. ಪ್ರಕರಣದ ಮುಂದಿನ ಕ್ರಮದ ಬಗ್ಗೆ ಪಂಜ ವಲಯ ಅರಣ್ಯಾಧಿಕಾರಿಗೆ ಹಸ್ತಾಂತರಿಸಲಾಗಿದೆ.
ರಕ್ತ ಚಂದನದ ಮರಗಳನ್ನು ಕಡಿದು ದಿಮ್ಮಿಗಳಾಗಿ ಪರಿವರ್ತಿಸಿ ಹಣ ಮಾಡುವ ಉದ್ದೇಶದಿಂದ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದಾಗಿ ದಾಳಿಯ ವೇಳೆ ತಿಳಿದುಬಂದಿದೆ.
- Advertisement -