Wednesday, June 24, 2026
Homeಕರಾವಳಿಉಡುಪಿಉಡುಪಿ: ವಿಟ್ಲಪಿಂಡಿ ಉತ್ಸವದಲ್ಲಿ ಭಾಗಿಯಾದ ಆರ್ ಸಿಬಿ ಆಟಗಾರರು

ಉಡುಪಿ: ವಿಟ್ಲಪಿಂಡಿ ಉತ್ಸವದಲ್ಲಿ ಭಾಗಿಯಾದ ಆರ್ ಸಿಬಿ ಆಟಗಾರರು

- Advertisement -
- Advertisement -

ಉಡುಪಿಯಲ್ಲಿ ಭಾನುವಾರ ಮತ್ತು ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಮತ್ತು ವಿಟ್ಲಪಿಂಡಿ ಉತ್ಸವದ ಸಂಭ್ರಮ ಮನೆ ಮಾಡಿತ್ತು. ಈ ವೇಳೆ ಹುಲಿವೇಷ ಸೇರಿದಂತೆ ಬೇರೆ ಬೇರೆ ವೇಷಧಾರಿಗಳು ಗಮನ ಸೆಳೆದ್ರು.ಅದರಲ್ಲೂ ಆರ್ ಸಿಬಿ ತಂಡದ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ರೋಮರಿಯೋ ಶೆಫರ್ಡ್, ನಿರೂಪಕ, ನಟ ಡ್ಯಾನಿಷ್ ಸೇಠ್ ವೇಷಧಾರಿಗಳು ಟ್ರೋಫಿ ಹಿಡಿದು ಜನರತ್ತ ಕೈ ಬೀಸಿ ಆರ್ ಸಿಬಿ ವಿಜಯೋತ್ಸವ ನಡೆಸಿದ್ದು ನೆರೆದಿದ್ದವರಿಗೆ ಥ್ರಿಲ್ಲಿಂಗ್ ಅನುಭವ ನೀಡಿದವು.

ಅದರಲ್ಲೂ ವಿರಾಟ್ ಕೊಹ್ಲಿ ವೇಷಧಾರಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬಿದ್ದದ್ದು ಕಂಡು ಬಂತು.

- Advertisement -

Latest News

error: Content is protected !!