Friday, June 27, 2025
Homeಕರಾವಳಿರಾಜ್ಯದ ವಿವಿಧೆಡೆಗಳಿಂದ ಪಿಲಿಕುಳಕ್ಕೆ ಬರಲಿದೆ ಅಪರೂಪದ ಪ್ರಾಣಿ, ಪಕ್ಷಿಗಳು..! ಇನ್ನು ಮುಂದೆ ‘ಹಳದಿ ಅನಕೊಂಡ’, ಗಂಡು ಏಷ್ಯಾಟಿಕ್ ಸಿಂಹ,...

ರಾಜ್ಯದ ವಿವಿಧೆಡೆಗಳಿಂದ ಪಿಲಿಕುಳಕ್ಕೆ ಬರಲಿದೆ ಅಪರೂಪದ ಪ್ರಾಣಿ, ಪಕ್ಷಿಗಳು..! ಇನ್ನು ಮುಂದೆ ‘ಹಳದಿ ಅನಕೊಂಡ’, ಗಂಡು ಏಷ್ಯಾಟಿಕ್ ಸಿಂಹ, ತೋಳಗಳು ಪಿಲಿಕುಳದಲ್ಲಿ…

spot_img
- Advertisement -
- Advertisement -

ಮಂಗಳೂರು: ಪಿಲಿಕುಳ ನಿಸರ್ಗಧಾಮವು ವಿಭಿನ್ನ ಪ್ರಾಣಿ, ಪಕ್ಷಿಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿದ್ದು, ಇದೀಗ ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ದೇಶದ ವಿವಿಧ ಮೃಗಾಲಯಗಳಿಂದ ಅಪರೂಪದ ವನ್ಯಜೀವಿಗಳನ್ನು ತರುವಂತಹ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಪಿಲಿಕುಳ ನಿಸರ್ಗಧಾಮಕ್ಕೆ ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್‌ನಿಂದ ‘ಹಳದಿ ಅನಕೊಂಡ’ ಉರಗಗಳು ಪಿಲಿಕುಳಕ್ಕೆ ತರಿಸಲಿದ್ದು, ಪಿಲಿಕುಳದಿಂದ ಇದರ ಬದಲಿಗೆ ಸರ್ಪ ಮತ್ತು ವಿಷಕಾರಿ ಹಾವುಗಳನ್ನು ನೀಡುವ ಯೋಜನೆಯಿದೆ. ಅಳಿವಿನಂಚಿನಲ್ಲಿರುವ ತೋಳಗಳು, ಫರಿಯಾಲ್ ಮೊಸಳೆ, ಅಪರೂಪದ ಪಕ್ಷಿಗಳನ್ನು ಪಂಜಾಬ್‌ನ ಮಹೇಂದ್ರ ಚೌದರಿ ಮೃಗಾಲಯದಿಂದ ತರಲಾಗುತ್ತಿದ್ದು, ಬದಲಿಗಾಗಿ ಹೆಚ್ಚುವರಿ ಪ್ರಾಣಿಗಳಾದ ಧೋಳ (ಕಾಡು ನಾಯಿ) ರೆಟಿಕ್ಯುಲೆಟೆಡ್ ಹೆಬ್ಬಾವು, ಮುಸಕೋಟಿ ಬಾತುಕೋಳಿ ಹಾಗೂ ಹೈನಾ (ಕತ್ತೆ ಕಿರುಬ)ಗಳನ್ನು ನೀಡಲಾಗುವುದು.

ಗಂಡು ಏಷ್ಯಾಟಿಕ್ ಸಿಂಹ, ಅಳಿವಿನಂಚಿನಲ್ಲಿರುವ ತೋಳ, ಘರಿಯಾಲ್ ಮೊಸಳೆ, ಅಪರೂಪದ ಪಕ್ಷಿಗಳನ್ನು ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ತರಲಾಗುತ್ತಿದ್ದು, ಬಾಂಬೈನ ಬೈಕುಳ ಮೃಗಾಲಯದಿಂದ ದಕ್ಷಿಣ ಅಮೆರಿಕ ಮೂಲದ ಪೆಂಗ್ವಿನ್ ಪಕ್ಷಿಗಳನ್ನು ತರಿಸಲಾಗುತ್ತಿದ್ದು, ಬದಲಿಗಾಗಿ ಪಿಲಿಕುಳದಿಂದ ಮಾರ್ಷ ಮೊಸಳೆಗಳನ್ನು ನೀಡಲಾಗುತ್ತಿದೆ. ಆಂಧ್ರ ಪ್ರದೇಶದ ತಿರುಪತಿ ಮೃಗಾಲಯದಿಂದ ಅಪರೂಪದ ಪಕ್ಷಿಗಳನ್ನು ತರಿಸಲಾಗುತ್ತಿದ್ದು, ಇದರ ಬದಲಿಗೆ ಮರಬೆಕ್ಕು ಇತ್ಯಾದಿಗಳನ್ನು ನೀಡಲಾಗುತ್ತಿದೆ. ಇನ್ನು ತಮಿಳು ನಾಡಿನ ವನ್ಡಲೂರ್ ಮೃಗಾಲಯದಿಂದ ಅಳಿವಿನಂಚಿನಲ್ಲಿರುವ ತೋಳಗಳು, ಅಪರೂಪದ ಪಕ್ಷಿಗಳನ್ನು ತರಿಸಲಾಗುತ್ತಿದ್ದು, ಇದರ ಬದಲಿಗೆ ಕಾಳಿಂಗ ಸರ್ಪ ಮತ್ತು ಹೈನಾ (ಕತ್ತೆಕಿರುಬ) ಗಳನ್ನು ನೀಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.   

- Advertisement -
spot_img

Latest News

error: Content is protected !!