- Advertisement -
- Advertisement -
ಮಂಗಳೂರು: ಭಾರತದಿಂದ ದುಬೈಗೆ ಪ್ರಯಾಣಿಸುವವರಿಗೆ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣದ ಆರು ಗಂಟೆಯೊಳಗೆ ನಡೆಸಲಾಗುತ್ತಿದ್ದ ರ್ಯಾಪಿಡ್ ಪಿಸಿಆರ್ ಟೆಸ್ಟ್ ರದ್ದುಗೊಳಿಸಲಾಗಿದೆ.
ಇದೇ ವೇಳೆ ಈಗಾಗಲೇ ಜಾರಿಯಲ್ಲಿರುವಂತೆ 48 ಗಂಟೆಯೊಳಗಿನ ಆರ್ಟಿ-ಪಿಸಿಆರ್ ತಪಾಸಣೆಯ ವರದಿಯನ್ನು ದುಬೈ ಪ್ರಯಾಣಿಸುವವರು ಹೊಂದಿರಬೇಕಾಗಿದೆ.
ಶಾರ್ಜಾ ಹಾಗೂ ಅಬುಧಾಬಿ ಮೊದಲಾದ ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸುವವರಿಗೆ ಸಂಬಂಧಿಸಿ ಯಾವುದೇ ಬದಲಾವಣೆ ಆಗಿಲ್ಲ. ದುಬೈಗೆ ಮಾತ್ರ ಈ ಹೊಸ ನಿಯಮ ಅನ್ವಯವಾಗಲಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
- Advertisement -