- Advertisement -
- Advertisement -
ಬೆಳ್ತಂಗಡಿ ತಾಲೂಕಿನಲ್ಲಿ ತೀವ್ರ ಮಳೆ ,ಗಾಳಿಯಿಂದ ಹಾನಿಗೊಳಗಾದ ನೆರಿಯ , ಮಲವಂತಿಗೆ ಮಿತ್ತಬಾಗಿಲು ಗ್ರಾಮಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿದರು. ಶೀಘ್ರವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಪಾರ ಹಾನಿಗೊಳಗಾದ ಕುಕ್ಕೆಜಾಲು, ಪಾದೆಗುಡ್ಡೆ, ಪರಪ್ಪು, ಕುಳೆನಾಡಿ ,ಮಲವಂತಿಗೆ ಗ್ರಾಮದ ಕಜಕ್ಕೆ, ನೇತ್ರಾಕೊಡಂಗೆ,ದರ್ಖಾಸ್ ಪ್ರದೇಶಗಳಿಗೆ ಬೇಟಿ ನೀಡಿದರು.

ಈ ಸಂದರ್ಭದಲ್ಲಿ ತಹಶಿಲ್ದಾರರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮೆಸ್ಕಾಂ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಪಂಚಾಯತ್ ಅಧ್ಯಕ್ಷರು ಸದಸ್ಯರು ಮಾಜಿ ಅಧ್ಯಕ್ಷರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ರಾಜನ್ ಪ್ರಮುಖರಾದ ಕೇಶವ ಪೂಜಾರಿ ,ಯು.ಕೆ ಇಸುಬು ಬೆನ್ನಿ ಪಿ ಎಲ್ ಮತ್ತು ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ,ಸದಸ್ಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಹಶಿಲ್ದಾರರು ಅರಣ್ಯ ಅಧಿಕಾರಿ ರವಿಚಂದ್ರ ಮತ್ತು ಮೇಸ್ಕಾಂ ಇಲಾಖೆ ಉಪಸ್ಥಿತರಿದ್ದರು
- Advertisement -