Saturday, June 28, 2025
Homeಕರಾವಳಿನಗರ ಸಭೆ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರಕ್ಕೆ ಸೋಲು; ‘ತಾವರೆ- ಕೈ’ಗೆ ಜಯ

ನಗರ ಸಭೆ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರಕ್ಕೆ ಸೋಲು; ‘ತಾವರೆ- ಕೈ’ಗೆ ಜಯ

spot_img
- Advertisement -
- Advertisement -

ಪುತ್ತೂರು: ನಗರ ಸಭೆಯ ಸದಸ್ಯರಿಬ್ಬರ ಅಕಾಲಿಕ ಮರಣದಿಂದಾಗಿ ತೆರವಾಗಿದ್ದಂತಹ ಸದಸ್ಯ ಸ್ಥಾನಗಳಿಗೆ ಡಿ. 27 ಬುಧವಾರದಂದು ಉಪಚುನಾವಣೆ ನಡೆಸಲಾಗಿದ್ದು, ಇಂದು(ಶನಿವಾರದಂದು) ಚುನಾವಣೆಯ ಮತ ಎಣಿಕೆ ನಡೆದಿದೆ.

ನಗರ ಸಭೆ ಚುನಾವಣೆಯಲ್ಲಿ ಪುತ್ತಿಲ ಪರಿವಾರವು ಸೋಲನ್ನು ಕಂಡಿದ್ದು, ವಾರ್ಡ್ 1ರಲ್ಲಿ ಕಾಂಗ್ರೆಸ್ ಹಾಗೂ ವಾರ್ಡ್ 11ರಲ್ಲಿ ಬಿಪಿಜೆ ಪಕ್ಷವು ಜಯ ಗಳಿಸುವ ಮೂಲಕ ಪುತ್ತಿಲ ಪರಿವಾರ ಮುಖಭಂಗ ಅನುಭವಿಸಿದೆ. ವಾರ್ಡ್ 1 ಮತ್ತು ವಾರ್ಡ್ 11ರಲ್ಲಿ ನಡೆದ ಚುನಾವಣೆಯ ಫಲಿತಾಂಶದಂತೆ ವಾರ್ಡ್ 1ರಲ್ಲಿ ಒಟ್ಟು 958 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ ನ ದಿನೇಶ್ ಶೇವಿರೆ 427 ಮತ, ಪುತ್ತಿಲ ಪರಿವಾರದ ಅನ್ನಪೂರ್ಣ 308 ಮತ ಹಾಗೂ ಬಿಜೆಪಿಯ ಸುನೀತಾ 219 ಮತ ಗಳಿಸಿದ್ದಾರೆ. ನೋಟಕ್ಕೆ 4 ಮತ ಚಲಾವಣೆಯಾಗಿದೆ. ಈ ಮೂಲಕ ಕಾಂಗ್ರೆಸ್ ನ ದಿನೇಶ್ ಶೇವಿರೆ 119 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

ವಾರ್ಡ್ 11 ರಲ್ಲಿ ಒಟ್ಟು 1053 ಮತಗಳಲ್ಲಿ ಬಿಜೆಪಿಯ ರಮೇಶ್ ರೈ 431 ಮತ, ಕಾಂಗ್ರೆಸ್ ನ ದಾಮೋದರ ಭಂಡಾರ್ಕರ್ 400 ಮತ, ಪುತ್ತಿಲ ಪರಿವಾರದ ಚಿಂತನ್ 216 ಮತ ಪಡೆದು ಕೊಂಡಿದ್ದಾರೆ. ನೋಟಕ್ಕೆ ಮತ ಚಲಾವಣೆಯಾಗಿದೆ. ಈ ಮೂಲಕ ಬಿಜೆಪಿ ರಮೇಶ್ ರೈ 31 ಮತಗಳ ಅಂತದಲ್ಲಿ ಜಯಗಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಈಗಾಗಲೇ ಪುತ್ತೂರಿನ ಬಿಜೆಪಿ ಪುತ್ತಿಲ ಪರಿವಾರದ ಬಿಕ್ಕಟ್ಟನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಮಾತುಕತೆಗಳು ನಡೆದಿದ್ದು, ಈ ನಡುವೆಯು ಕೆಲವೊಂದು ವಿಚಾರಗಳ ತೀರ್ಮಾನದಲ್ಲಿ ಎರಡು ಪಕ್ಷಗಳು ತಮ್ಮ ಬಂಡಾಯವನ್ನು ಮುಂದುವರೆಸಿತ್ತು. ಇದೇ ಜನರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

- Advertisement -
spot_img

Latest News

error: Content is protected !!