- Advertisement -
- Advertisement -
ಮಂಗಳೂರು: ನಿನ್ನೆ ನಗರದ ಪಬ್ ಮೇಲೆ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪಬ್ ನ ಮ್ಯಾನೇಜರ್ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಬಲ್ಮಠ ಬಳಿಯ ಪಬ್ ನ ಒಳಗೆ ಅಪ್ರಾಪ್ತರಿಗೂ ಪ್ರವೇಶ ನೀಡಲಾಗಿತ್ತು, ಇದಲ್ಲದೆ ಮದ್ಯ ನೀಡಿದ ವಿಚಾರವಾಗಿ ಪಬ್ ನ ಮ್ಯಾನೇಜರ್ ಮತ್ತು ಸಿಬ್ಬಂದಿಯನ್ನು ಮಂಗಳೂರು ಬಂದರು ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಪಬ್ ನಲ್ಲಿ ವಿದಾಯ ಕೂಟ ನಡೆಸುತ್ತಿದ್ದರು ಎನ್ನಲಾಗಿದೆ. ವಿಚಾರ ತಿಳಿದ ಭಜರಂಗದಳ ಕಾರ್ಯಕರ್ತರು ಪಬ್ ಮೇಲೆ ದಾಳಿ ಮಾಡಿದ್ದರು.
.
- Advertisement -