- Advertisement -
- Advertisement -
ಸುಳ್ಯ; ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಬಹುತೇಕ ಪೂರ್ಣವಾಗಿದ್ದು ಇದೇ 27ರಂದು ಗೃಹ ಪ್ರವೇಶ ನಡೆಯಲಿದೆ.
ಈ ಮನೆಗೆ ‘ಪ್ರವೀಣ್’ ಎಂದು ನಾಮಕರಣ ಮಾಡಲಾಗಿದೆ. 27ರಂದು ಬೆಳಿಗ್ಗೆ 8.40ಕ್ಕೆ ಶ್ರೀಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಗೃಹ ಪ್ರವೇಶ ನಡೆಯಲಿದೆ. ಅದೇ ದಿನ ರಾತ್ರಿ 7 ಗಂಟೆಗೆ ಕಲ್ಲುರ್ಟಿ ದೈವದ ನರ್ತನ ಸೇವೆ ಸಹ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
‘ದಿವಂಗತ ಪ್ರವೀಣ್ ನೆಟ್ಟಾರು ಅವರ ಕುಟುಂಬದವರು ನೀಡಿದ ನಕ್ಷೆಯ ಪ್ರಕಾರ, ಕುಟುಂಬ ವಾಸವಿದ್ದ ಜಾಗದಲ್ಲೇ ಮನೆ ನಿರ್ಮಿಸಲಾಗಿದೆ. 2,700 ಚದರ ಅಡಿ ವಿಸ್ತೀರ್ಣದ ಮನೆಗೆ, ಅಂದಾಜು ₹60 ಲಕ್ಷ ವೆಚ್ಚವಾಗಿದೆ. ಸಂಪೂರ್ಣ ವೆಚ್ಚವನ್ನು ಪಕ್ಷದಿಂದಲೇ ಭರಿಸಲಾಗಿದೆ’ ಎನ್ನಲಾಗಿದೆ.
- Advertisement -