Thursday, May 2, 2024
Homeತಾಜಾ ಸುದ್ದಿಬೊಮ್ಮಾಯಿ, ಸಿಟಿ ರವಿ, ಸುನಿಲ್, ಕಟೀಲ್‌ ದಾರಿ ತಪ್ಪಿದ್ದಾರೆ: ಇವರನ್ನು ಸರಿಮಾಡಿ, ಸಿದ್ಧಾಂತ ಉಳಿಸಿಕೊಳ್ಳಬೇಕು: ಪ್ರಮೋದ್...

ಬೊಮ್ಮಾಯಿ, ಸಿಟಿ ರವಿ, ಸುನಿಲ್, ಕಟೀಲ್‌ ದಾರಿ ತಪ್ಪಿದ್ದಾರೆ: ಇವರನ್ನು ಸರಿಮಾಡಿ, ಸಿದ್ಧಾಂತ ಉಳಿಸಿಕೊಳ್ಳಬೇಕು: ಪ್ರಮೋದ್ ಮುತಾಲಿಕ್

spot_img
- Advertisement -
- Advertisement -

ಬೆಂಗಳೂರು: ಹಿಂದುತ್ವವಾದಿ ಕಾರ್ಯಕರ್ತರ ಪಾಲಿಗೆ ಬಿಜೆಪಿ ಎನ್ನುವುದು ಕುಡುಕ ಗಂಡನಿದ್ದಂತೆ. ಅದರ ಮನೆತನ ಒಳ್ಳೇದಿದೆ. ಆದರೆ ಗಂಡನಷ್ಟೇ ದಾರಿ ತಪ್ಪಿದ್ದಾನೆ. ಅವನನ್ನು ಬೈದು, ತಿವಿದು, ಹಿರಿಯರಿಂದ ಬುದ್ಧಿ ಹೇಳಿಸಿ ಸರಿದಾರಿಗೆ ತರಬೇಕು. ಡೈವೋರ್ಸ್​ ಕೊಡಲು ಆಗುವುದಿಲ್ಲ. ಈ ಭ್ರಷ್ಟ ಬಿಜೆಪಿಗೆ ಒಳಗಿನಿಂದಲೂ ಚುಚ್ಚಬೇಕು, ಒಳಗಿನಿಂದಲೂ ಸರಿಮಾಡಬೇಕು ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.  

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನಾಯಕರಾದ ನೀವು ಲೂಟಿಗಾಗಿ ಇರುವುದಲ್ಲ. ಇವರು ತಮ್ಮ ಮಕ್ಕಳನ್ನು ಮುಂದೆ ತರುತ್ತಿದ್ದಾರೆ. ಆದರೆ ಕಾರ್ಯಕರ್ತರನ್ನು ಮಾತ್ರ ಪೋಸ್ಟರ್ ಹಚ್ಚಲು ಸೀಮಿತಗೊಳಿಸಿದ್ದಾರೆ. ಕುಡುಕ ಗಂಡನನ್ನ ಸುಧಾರಿಸೋದು ಹೆಂಡತಿಯ ಕರ್ಮ. ನಾವು ಇವರನ್ನು ಸರಿ ಮಾಡ್ತೀವಿ. ಎಷ್ಟೋ ಜನರ ತ್ಯಾಗ-ಬಲಿದಾನಗಳಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರಿಗೆ ಇದನ್ನು ಅರ್ಥ ಮಾಡಿಸುವುದು ನಮ್ಮ ಜವಾಬ್ದಾರಿ’ ಎಂದು ಹೇಳಿದರು.

ಹಾಗೇ ನಮ್ಮ ಬೊಮ್ಮಾಯಿ, ಸಿಟಿ ರವಿ, ಸುನಿಲ್, ನಳೀನ್ ದಾರಿ ತಪ್ಪಿದ್ದಾರೆ. ಇವರನ್ನು ಸರಿಮಾಡಿಕೊಳ್ಳಬೇಕು. ಸಿದ್ಧಾಂತ ಉಳಿಸಿಕೊಳ್ಳಬೇಕು ಎಂದು ಹೇಳಿದ್ರು.

- Advertisement -
spot_img

Latest News

error: Content is protected !!