- Advertisement -
- Advertisement -
ಪುತ್ತೂರು: ಪುತ್ತೂರು ಶಾಸಕಿಯಾಗಿ ಹಲವಾರು ಜನಪರ ಕೆಲಸಗಳನ್ನು ಮಾಡಿರುವ ಪ್ರೀತಿಯ ‘ಶಕು ಅಕ್ಕ’ ಖ್ಯಾತಿಯ ಶಕುಂತಲಾ ಶೆಟ್ಟಿ, ಸದ್ಯ ತಮ್ಮ ರಾಜಕೀಯ ಜಂಜಾಟಗಳ ನಡುವೆಯೂ ತಮ್ಮ ಸ್ನೇಹಿತೆಯರೊಂದಿಗೆ ತಾವೇ ಮುಂದೆ ನಿಂತು ಗದ್ದೆಯ ನಾಟಿ ಕಾರ್ಯ ಮಾಡುತ್ತಿದ್ದಾರೆ.
ಹಿಂದಿನ ಕಾಲದಿಂದ ಬಂದಿರುವ ಧಾರ್ಮಿಕ ನಂಬಿಕೆಯ ಪ್ರತೀಕವಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬಂದಿದ್ದ ಶಕುಂತಲಾ ಶೆಟ್ಟಿಯವರ ಸ್ನೇಹಿತೆಯರು, ಗದ್ದೆಯಲ್ಲಿ ಸಾಮೂಹಿಕವಾಗಿ ನಾಟಿ ಮಾಡುವ ಅಪರೂಪದ ಸನ್ನಿವೇಶ ಸೃಷ್ಟಿಸಿದರು.
ಯಾಂತ್ರೀಕೃತ ಕೃಷಿ, ತೋಟಗಾರಿಕೆ, ಗದ್ದೆ ಕೃಷಿಯನ್ನು ಕೈಬಿಡುತ್ತಿರುವ ಸನ್ನಿವೇಶ, ಕೃಷಿಗೆ ಜನರೇ ಸಿಗದ ಇಂದಿನ ಪರಿಸ್ಥಿತಿ ನಡುವೆಯೂ ಕೃಷಿಯ ಕಡೆಗೆ ಒಲವು ತೋರಿಸಿರುವ ಶಕುಂತಲಾ ಶೆಟ್ಟಿ, ಈ ಮೂಲಕ ತಾನು ರಾಜಕಾರಣದ ಜೊತೆಗೆ ಕೃಷಿ ಕೆಲಸಕ್ಕೂ ತಾನು ಸೈ ಎಂದು ತೋರಿಸಿಕೊಟ್ಟಿದ್ದಾರೆ.
- Advertisement -