- Advertisement -
- Advertisement -
ಚಾರ್ಮಾಡಿ: ಈಗಾಗಲೇ ಮಹಾರಾಷ್ಟ್ರವನ್ನು ಅಕ್ಷರಶಃ ನಡುಗಿಸಿರುವ ನಿಸರ್ಗ ಚಂಡಮಾರುತದ ಹಾವಳಿ ಕರಾವಳಿ ಮತ್ತು ಮಲೆನಾಡಿಗೂ ತಟ್ಟಿದ್ದು, ಗಾಳಿ ಸಮೇತ ಧಾರಾಕಾರ ಮಳೆ ಸುರುಯುತ್ತಿದೆ.
ನಿರಂತರ ಮಳೆಯಾಗುತ್ತಿದೆ ಪರಿಣಾಮ ಚಾರ್ಮಾಡಿ ಘಾಟಿಯಲ್ಲಿ ಮೊಟ್ಟೆ ಸಾಗಾಟದ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಘಾಟಿಯ ಮೂರನೇ ತಿರುವಿನಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ, ಟೆಂಪೋದಲ್ಲಿದ್ದ ಸಾವಿರಾರು ಮೊಟ್ಟೆಗಳು ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾಗಿ ಬಿದ್ದು ನಾಶವಾಗಿದೆ.
- Advertisement -