Friday, June 27, 2025
Homeಕರಾವಳಿಪುತ್ತೂರಿನಲ್ಲಿ ಶುರುವಾಗಿದೆ ಭಗವಧ್ವಜ ಅಭಿಯಾನ : ಹಿಂದೂಗಳ ಆಟೋ ಬಳಸುವಂತೆ ಹಿಂದೂ ಜಾಗರಣ ವೇದಿಕೆ ಕರೆ

ಪುತ್ತೂರಿನಲ್ಲಿ ಶುರುವಾಗಿದೆ ಭಗವಧ್ವಜ ಅಭಿಯಾನ : ಹಿಂದೂಗಳ ಆಟೋ ಬಳಸುವಂತೆ ಹಿಂದೂ ಜಾಗರಣ ವೇದಿಕೆ ಕರೆ

spot_img
- Advertisement -
- Advertisement -

ಪುತ್ತೂರು: ಅನ್ಯಧರ್ಮದವರಿಗೆ ವ್ಯಾಪಾರ ನಿರ್ಬಂಧದ ಮಧ್ಯದಲ್ಲಿ ಇದೀಗ ಪುತ್ತೂರಿನಲ್ಲಿ ಹೊಸ ಅಭಿಯಾನ ಶುರುವಾಗಿದೆ. ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವಕ್ಕೆ ಹಿಂದೂಗಳ ಆಟೋಗಳನ್ನೇ ಬಳಸುವಂತೆ ಅಭಿಯಾನ‌ ಮಾಡಲಾಗುತ್ತಿದೆ. ಹಿಂದೂ ಜಾಗರಣ ವೇದಿಕೆ ಈ ಅಭಿಯಾನ ಆರಂಭಿಸಿದೆ,

ಹಿಂದೂಗಳ ಆಟೋಗಳಿಗೆ ಭಗವಧ್ವಜ ನೀಡಿ ಅಭಿಯಾನ ಆರಂಭ ಮಾಜಲಾಗಿದೆ.  ಭಗವಧ್ವಜ ಇದ್ದ ಆಟೋಗಳನ್ನೇ ಹಿಂದೂ ಭಕ್ತಾಧಿಗಳು ಆಯ್ಕೆ ಮಾಡಬೇಕೆಂದು ಮನವಿ ಮಾಡಿದೆ ಹಿಂದೂ ಜಾಗರಣ ವೇದಿಕೆ.  

ಎಪ್ರಿಲ್ 10 ರಿಂದ 20 ರವರೆಗೆ ಆಟೋಗಳು ಕೇಸರಿ ಧ್ವಜವನ್ನು ಹಾಕಿ ಓಡಾಟ ನಡೆಸುವಂತೆ ಮನವಿ ಮಾಡಲಾಗಿದೆ. ಹಿಂದೂ ಹೆಣ್ಣುಮಕ್ಕಳನ್ನು ಹಿಂದೂಗಳೇ ರಕ್ಷಿಸಬೇಕಾದ ಸಮಯ ಬಂದಿದೆ. ಹಿಂದುತ್ವದ ಹೆಸರಿನಲ್ಲಿ ಬಂದ ಸರಕಾರ ಹಿಂದೂಗಳಿಗೆ ಸಹಕಾರ ನೀಡುತ್ತಿಲ್ಲ. ಹಿಂದೂಗಳ ಮೇಲೆಯೇ ಕೇಸುಗಳನ್ನು ದಾಖಲಿಸಲಾಗುತ್ತಿದೆ.ಹಿಂದೂ ಹೆಣ್ಣುಮಕ್ಕಳನ್ನು ರಕ್ಷಿಸುವ ಕೆಲಸವನ್ನು ಸಂಘಟನೆಗಳು ನಿರಂತರ ಮಾಡಲಿದೆ. ಈ ಅಭಿಯಾನದ ಒಂದು ಭಾಗ ಆಟೋಗಳಿಗೆ ಭಗವಧ್ವಜ ಹಾಕಿಸಿ ಹಿಂದುತ್ವ ಉಳಿಸುವ ಕಾರ್ಯ ಎಂದು  ಹಿಂದೂ ಜಾಗರಣ ವೇದಿಕೆಯ‌ ಮುಖಂಡರು ಸ್ಪಷ್ಟನೆ ನೀಡಿದ್ದಾರೆ. ಎ.10ರಿಂದ 20ರವರೆಗೆ ಪುತ್ತೂರು ಜಾತ್ರಾ ಮಹೋತ್ಸವ ನಡೆಯಲಿದೆ.

- Advertisement -
spot_img

Latest News

error: Content is protected !!