- Advertisement -
- Advertisement -
ಬಳಂಜ: ನಾಡಿಗೆ ದೊಡ್ಡ ಹಬ್ಬವೆಂದೇ ಖ್ಯಾತಿ ಪಡೆದ ನಾಗರ ಪಂಚಮಿ ಜು.25ರಂದು ನಡೆಯಲಿದ್ದು, ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅವಕಾಶ ನೀಡದೆ ದೇವಳದ ಸಿಬ್ಬಂದಿಗಳೇ ರಾಜ್ಯದ ನಾನಾ ಕಡೆ ಸರಳವಾಗಿ ಆಚರಿಸುತ್ತಿದ್ದಾರೆ.
ಆದರೆ ಬೆಳ್ತಂಗಡಿ ತಾಲೂಕಿನ ಬಳಂಜ ಶಾಸ್ತಾರ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವಿಸ್ಮಯವೊಂದು ಮೂಡಿ ಬಂದು ಭಕ್ತರನ್ನು ಆಕರ್ಷಿಸುತ್ತಿದೆ.
ದೇವಸ್ಥಾನದ ಗರ್ಭಗುಡಿಯ ಪಕ್ಕದಲ್ಲಿರುವ ನಾಗದೇವರ ಕಲ್ಲಿನ ಮೂರ್ತಿಯ ಸುತ್ತ ಬಳ್ಳಿಯೊಂದರಲ್ಲಿ ನಾಗನ ಹೆಡೆ ಮೂಡಿದೆ. ಈ ವಿಸ್ಮಯವನ್ನು ನೋಡಲು ಭಕ್ತ ಸಮೂಹ ಆಗಮಿಸುತ್ತಿದೆ ಎಂದು ದೇವಾಲಯದ ಧರ್ಮದರ್ಶಿ ಜಯಸಾಲಿಯಾನ್ ತಿಳಿಸಿದ್ದಾರೆ.
- Advertisement -