Friday, May 17, 2024
Homeಕರಾವಳಿಸುರತ್ಕಲ್: ದಿನಗೂಲಿ ಕಾರ್ಮಿಕನ ಕೊಲೆ, ಇಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ !

ಸುರತ್ಕಲ್: ದಿನಗೂಲಿ ಕಾರ್ಮಿಕನ ಕೊಲೆ, ಇಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ !

spot_img
- Advertisement -
- Advertisement -

ಸುರತ್ಕಲ್: 2018 ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ III ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.

ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸಪ್ಪ ಬಾಳಪ್ಪ ಜಕಾತಿ ತೀರ್ಪು ನೀಡಿದ್ದಾರೆ. ನ್ಯಾಯಾಲಯವು ಇಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಿದೆ.

2018ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಯ ಎಂಬಲ್ಲಿ ಈ ಅಪರಾಧ ನಡೆದಿತ್ತು. ಕೊಪ್ಪಳದ ಕುಸ್ಟಗಿಯ ಕಬ್ಬರಗಿ ನಿವಾಸಿ ಮರಿಯಪ್ಪ ಕೊಲೆಯಾದವರು. ಮರಿಯಪ್ಪ ಸುರತ್ಕಲ್‌ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು.

ಮರಿಯಪ್ಪ ತನ್ನ ಸಂಪಾದನೆಯ 10 ಸಾವಿರ ರೂ.ಗಳನ್ನು ಆರೋಪಿ ಗೌಡಪ್ಪಗೌಡ ಸಣ್ಣಗೌಡ್ರು ಎಂಬುವರಿಗೆ ನೀಡಿದ್ದರು. ಬಳಿಕ ಮರಿಯಪ್ಪ ಹಣ ಕೇಳಿದಾಗ ಆರೋಪಿಗಳು ಕೊಲೆ ಮಾಡಿದ್ದರು.

ಗೌಡಪ್ಪಗೌಡ ಸಣ್ಣಗೌಡ್ರು ಮತ್ತು ಹುಲ್ಲಪ್ಪ ಬಸಪ್ಪ ಇಬ್ಬರೂ ಕೊಡಲಿಯಿಂದ ಮರಿಯಪ್ಪನನ್ನು ಹತ್ಯೆ ಮಾಡಿದ್ದಾರೆ. ನಂತರ, ಸಾಕ್ಷ್ಯವನ್ನು ನಾಶಪಡಿಸಲು, ಮರಿಯಪ್ಪನ ಮೃತದೇಹವನ್ನು ವಿರೂಪಗೊಳಿಸಿ ಚರಂಡಿಗೆ ಎಸೆಯಲಾಯಿತು. ಮೇ 31, 2018 ರಂದು ಈ ಘಟನೆ ನಡೆದಿದ್ದು, ಜೂನ್ 2 ರಂದು ಚೊಕ್ಕಬೆಟ್ಟು ಸೇತುವೆಯ ಕೆಳಗೆ ಮೃತದೇಹ ಪತ್ತೆಯಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಸುರತ್ಕಲ್ ಪೊಲೀಸರು 32 ಸಾಕ್ಷ್ಯಗಳೊಂದಿಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಮೃತರ ಪತ್ನಿ ಹುಲ್ಲವ್ವ ಅವರಿಗೆ 10,000 ರೂಪಾಯಿ ನೀಡಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

- Advertisement -
spot_img

Latest News

error: Content is protected !!