- Advertisement -
- Advertisement -
ಮಂಗಳೂರು: ಸಿಪಿಎಂ ಪಕ್ಷದ ಹಿರಿಯ ಮುಂದಾಳುವಾಗಿದ್ದ ಮೋರ್ಲ ವೆಂಕಪ್ಪ ಶೆಟ್ಟಿ (87) ನಿಧನರಾಗಿದ್ದಾರೆ.ಅವರು ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ವಿಮರ್ಶಕರು, ಸಾಹಿತ್ಯ ಚಿಂತಕರಾಗಿದ್ದರು.
ವರ್ಕಾಡಿ ಗಡಿಪ್ರಧಾನ ಮನೆಯವರಾಗಿದ್ದ ವೆಂಕಪ್ಪ ಶೆಟ್ಟಿ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸ ಹೊಂದಿದ್ದರು ಇವರು 1965 ರಲ್ಲಿ ಸಿಪಿಎಂ ಪಕ್ಷದಲ್ಲಿ ರೈತರ ಬೇಡಿಕೆ ಈಡೇರಿಸಲು ಮಂಗಳೂರಿನಿಂದ ಬೆಂಗಳೂರು ತನಕ ಕಾಲ್ನಡಿಗೆ ಜಾಥಾ ನಡೆಸಿದ್ದರು.ಮೃತರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.
- Advertisement -