- Advertisement -
- Advertisement -
ಉಡುಪಿ: ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ರಘುಪತಿ ಭಟ್ ಕಣ್ಣೀರು ಹಾಕಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ನನ್ನನ್ನು ನಡೆಸಿಕೊಂಡು ರೀತಿ ನನಗೆ ತುಂಬಾ ನೋವು ತಂದಿದೆ ಎಂದಿದ್ದಾರೆ.
ನನಗೆ ಟಿಕೆಟ್ ಸಿಗಲ್ಲ ಅಂತ ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ. ಏನೇ ಆದ್ರೂ ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ನಾನು ರೆಡ್ಡಿ ಪಕ್ಷಕ್ಕೆ ಹೋಗ್ತೇನೆ ಅನ್ನೋದು ಕೇವಲ ಊಹಾಪೋಹ. ಹಾಗೇ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಬಗ್ಗೆಯೂ ನಾನು ನಿರ್ಧರಿಸಿಲ್ಲ ಎಂದರು.
- Advertisement -