- Advertisement -
- Advertisement -
ಸುಳ್ಯ: ಸುಳ್ಯ ತಾಲೂಕಿನ ಗಡಿ ಭಾಗದಲ್ಲಿರುವ ಹಾಗೂ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ದಬ್ನಡ್ಕ ರಸ್ತೆ ಅಭಿವೃದ್ಧಿ ಮತ್ತು ಡಾಮರೀಕರಣ ಮತ್ತು ಊರುಬೈಲು ಸೇತುವೆ ಕಾಮಗಾರಿಗಳು ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು.
ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಈ ಎರಡು ಕಾಮಗಾರಿಗಳನ್ನು ಅತೀ ತುರ್ತಾಗಿ ಮಾಡಬೇಕೆಂಬ ಸ್ಥಳೀಯ ನಾಯಕರ ಬೇಡಿಕೆಯಂತೆ ಶಾಸಕ ಕೆ.ಜಿ.ಬೋಪಯ್ಯರವರು ಶೀಘ್ರವಾಗಿ ಕಾಮಗಾರಿ ಪ್ರಾರಂಭ ಮಾಡುವಂತೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕರು ದಬ್ಬಡ್ಕ ರಸ್ತೆ ಮತ್ತು ಊರುಬೈಲು ಸೇತುವೆ ಕಾಮಗಾರಿಗಳನ್ನು ವೀಕ್ಷಿಸಿ, ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ಸಂಪಾಜೆ ಪಯಸ್ವಿನಿ ಸಹಕಾರ ಸಂಘದ ಅದ್ಯಕ್ಷ ಶ್ರೀ. ಅನಂತ್ ಎನ್ ಸಿ ,ನಿರ್ದೇಶಕ ಶ್ರೀ ದಿನೇಶ್ ಸಣ್ಣಮನೆ,ಗುತ್ತಿಗೆ ದಾರರಾದ ಬಾಲನ್,ಯತೀಶ್ ಮತ್ತಿತರರು ಉಪಸ್ಥಿತರಿದ್ದರು.
- Advertisement -