- Advertisement -
- Advertisement -
ಮಂಗಳೂರು: ಪಚ್ಚನಾಡಿ ಹತ್ತಿರ ಮಂದಾರ ಬಳಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಬೃಹತ್ ಮರವನ್ನು ಕಂಡು ಅಪಘಾತ ತಪ್ಪಿಸಲು ಕೆಂಪು ಬಟ್ಟೆ ತೋರಿಸಿ ರೈಲು ನಿಲ್ಲಿಸಿ ಹಲವರ ಪ್ರಾಣ ಉಳಿಸಿದ ಚಂದ್ರಾವತಿಯವರ ಮನೆಗೆ ಇಂದು ಶಾಸಕ ಭರತ್ ಶೆಟ್ಟಿ ಭೇಟಿ ನೀಡಿದ್ರು.
ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿಸಿದ ಚಂದ್ರಾವತಿಯವರನ್ನು ಸನ್ಮಾನಿಸಿದ್ರು. ಈ ವೇಳೆ ಮನಪಾ ಸದಸ್ಯರುಗಳಾದ ಸಂಗೀತಾ, ಕಿರಣ್ ಕುಮಾರ್, ಕಾರ್ಯಕರ್ತರು ಸೇರಿದಂತೆ ಇತರರು ಜೊತೆಗಿದ್ದರು.
- Advertisement -