- Advertisement -
- Advertisement -
ಮಂಗಳೂರು: ನಗರದ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ ಅವರಿಗೆ ಮಹಾಮಾರಿ ಸೋಂಕು ಕೊರೋನಾ ವಿರುದ್ಧ ಗೆದ್ದು ಬಂದಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಅವರು ಸ್ಪಷ್ಟಪಡಿಸಿದ್ದಾರೆ.
ಟ್ವೀಟ್ ನಲ್ಲಿ ಹೇಳಿರುವುದೇನು?
ದೇವರ ಕೃಪೆಯಿಂದ.. ನಿಮ್ಮೆಲ್ಲರ ಆಶೀರ್ವಾದ, ಪ್ರಾರ್ಥನೆ, ಶುಭಾಶಯ ಹಾಗೂ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳಿಂದ ಹೆಚ್ಚಿನ ಕಾಳಜಿಯಿಂದಾಗಿ COVID19 ನಿಂದ ನಾನು ಚೇತರಿಸಿಕೊಂಡಿದ್ದೇನೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಹಾಗೆಯೆ ಮುಂದಿನ 10 ದಿನಗಳವರೆಗೆ ನಾನು ಕ್ವಾರೆಂಟೈನ್ ನಲ್ಲಿರಲು ನಿರ್ಧರಿಸಿದ್ದು, ಕ್ರಮೇಣ ಕೆಲಸವನ್ನು ಪುನರಾರಂಭಿಸುತ್ತೇನೆ. ಎಲ್ಲರೂ ಸುರಕ್ಷಿತವಾಗಿರಿ. ನಾವು ಒಟ್ಟಾಗಿ ನಿಂತು ಈ ಸಾಂಕ್ರಾಮಿಕ ವಿರುದ್ಧ ಹೋರಾಡೋಣ ಎಂದು ಟ್ವೀಟ್ ಮಾಡಿದ್ದಾರೆ.
- Advertisement -