- Advertisement -
- Advertisement -
ಸುಳ್ಯ: ಸಚಿವ ಮತ್ತು ಸುಳ್ಯ ಶಾಸಕ ಎಸ್. ಅಂಗಾರ ತಮ್ಮ ಕ್ಷೇತ್ರದ ಜನರಿಗಾಗಿ ಬಾಲಿವುಡ್ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ಉಚಿತ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಸುಳ್ಯದ ಸಂತೋಷ್ ಚಿತ್ರಮಂದಿರದಲ್ಲಿ ನಾಳೆ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಹಿನ್ನೆಲೆಯ ಕಾಶ್ಮೀರ್ ಫೈಲ್ಸ್ ಪ್ರದರ್ಶನಗೊಳ್ಳಲಿದೆ. ಬೆಳಗ್ಗೆ 11 ಗಂಟೆ, ಮಧ್ಯಾಹ್ನ 2 ಗಂಟೆ, ಸಂಜೆ 6 ಗಂಟೆ ಮತ್ತು ರಾತ್ರಿ 9 ಗಂಟೆಗೆ ಒಟ್ಟು ನಾಲ್ಕು ಶೋ ಗಳು ಇರಲಿವೆ.
ಪ್ರಥಮ ಶೋ ಗಳಲ್ಲಿ ಮಹಿಳೆಯರು ಮತ್ತು ದೂರದ ಊರಿನವರಿಗೆ ಅವಕಾಶ ಕಲ್ಪಿಸಲಾಗಿದ್ದು, ಸುಳ್ಯ ನಗರ ಮತ್ತು ಸಮೀಪದ ಗ್ರಾಮಗಳವರು ರಾತ್ರಿಯ ಶೋ ಗೆ ಆಗಮಿಸುವಂತೆ ಸಚಿವ ಅಂಗಾರ ಮನವಿ ಮಾಡಿದ್ದಾರೆ.
ಈ ಮೊದಲು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮತ್ತು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಕ್ಷೇತ್ರಗಳ ಜನರಿಗೆ ಉಚಿತ ಸಿನಿಮಾ ಪ್ರದರ್ಶನ ಆಯೋಜಿಸಿದ್ದರು. ರಾಜ್ಯದ ಸಚಿವರ ಪೈಕಿ ಉಚಿತ ಪ್ರದರ್ಶನ ಆಯೋಜಿಸಿದವರಲ್ಲಿ ಅಂಗಾರ ಮೊದಲಿಗರಾಗಿದ್ದಾರೆ
- Advertisement -