Monday, June 30, 2025
Homeತಾಜಾ ಸುದ್ದಿಮಾನಸಿಕ ಅಸ್ವಸ್ಥನ ರಂಪಾಟಕ್ಕೆ ಬಲಿಯಾಯ್ತು ಎರಡು ಜೀವ

ಮಾನಸಿಕ ಅಸ್ವಸ್ಥನ ರಂಪಾಟಕ್ಕೆ ಬಲಿಯಾಯ್ತು ಎರಡು ಜೀವ

spot_img
- Advertisement -
- Advertisement -

ಬೆಂಗಳೂರುಃ ಮಾನಸಿಕ ಅಸ್ವಸ್ಥನೊಬ್ಬನ ಹುಚ್ಚಾಟಕ್ಕೆ ಬೆಂಗಳೂರಿನಲ್ಲಿ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ. ಬೆಂಗಳೂರಿನ ಬಿನ್ನಿ ಮಿಲ್ ಬಳಿಯ ಬಕ್ಷಿ ಗಾರ್ಡನ್ ಬಳಿ ಗಣೇಶ್ ನಿನ್ನೆ
ಮೈಸೂರು ರಸ್ತೆಯ ಮಟನ್ ಶಾಪ್ಗೆ ಹೋಗಿದ್ದ. ಆದ್ರೆ, ಅಲ್ಲಿ ಅದೇನಾಯ್ತೋ ಏನೋ.. ಏಕಾಏಕಿ ಮಟನ್ ಶಾಪ್ನಲ್ಲಿದ್ದ ಚಾಕು ಕೈಗೆತ್ತಿಕೊಂಡಿದ್ದ. ಬಳಿಕ ದಾರಿಯುದ್ದಕ್ಕೂ ಸಿಕ್ಕ ಸಿಕ್ಕವ್ರ ಮೇಲೆ ಅಟ್ಯಾಕ್ ಮಾಡಿದ್ದಾನೆ
.
ಬಿನ್ನಿ ಮಿಲ್ ಬಳಿ ರಸ್ತೆಯಲ್ಲಿ ಮಾರಿ ಎಂಬ ಯುವಕನ ಎದೆಗೆ ಇರಿದುಬಿಟ್ಟಿದ್ದ. ನಂತರ, ವೇಲಾಯುಧನ್, ಸುರೇಶ್ ಸೇರಿದಂತೆ ಒಟ್ಟು 8 ಮಂದಿ ಮೇಲೆ ದಾಳಿ ನಡೆಸಿದ್ದ. ದುರಂತ ಏನಂದ್ರೆ, ಕಿರಾತಕನ ಏಟಿನಿಂದ ತೀವ್ರ ರಕ್ತಸ್ರಾವವಾಗಿ ಮಾರಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ರಾಜೇಶ್(28) ಮೃತಪಟ್ಟಿದ್ದಾನೆ.

ಗಣೇಶನ ಹುಚ್ಚಾಟ ಗೊತ್ತಾಗ್ತಿದ್ದಂತೆ ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಸ್ತೆಯಲ್ಲಿ ಚಾಕು ಹಿಡಿದು ಓಡಾಡುತ್ತಿದ್ದ ಗಣೇಶನನ್ನು ಪಿಎಸ್ಐ ಮೂರ್ತಿ ಅಂಡ್ ಟೀಂ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದರು. ಆರೋಪಿಯು ಮಾನಸಿಕ ಅಸ್ವಸ್ಥ ಅಂತ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇನ್ನು ಈತನನ್ನು ನೋಡಿಕೊಳ್ಳಲು ನಾಲ್ಕು ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಈತನ ರಂಪಾಟಕ್ಕೆ ಪೊಲೀಸರು ಸುಸ್ತಾಗಿ ಹೋಗಿದ್ದಾರಂತೆ.

- Advertisement -
spot_img

Latest News

error: Content is protected !!