Saturday, June 28, 2025
Homeಕರಾವಳಿಮಂಗಳೂರುಬೆಳ್ತಂಗಡಿ : ಮಾ.1 ರಂದು ಯಂಗ್ ಬಾಯ್ಸ್ ಸವಣಾಲು ಇವರಿಂದ ಮ್ಯಾಟ್ ಕಬಡ್ಡಿ ಪಂದ್ಯಾಟ

ಬೆಳ್ತಂಗಡಿ : ಮಾ.1 ರಂದು ಯಂಗ್ ಬಾಯ್ಸ್ ಸವಣಾಲು ಇವರಿಂದ ಮ್ಯಾಟ್ ಕಬಡ್ಡಿ ಪಂದ್ಯಾಟ

spot_img
- Advertisement -
- Advertisement -

ಬೆಳ್ತಂಗಡಿ : ಯಂಗ್ ಬಾಯ್ಸ್ ಸವಣಾಲು ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) , ಬೆಳ್ತಂಗಡಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್(ರಿ) ಇದರ ಸಹಭಾಗಿತ್ವದಲ್ಲಿ “ಪ್ರೀತಮ್ ಮತ್ತು ಚಿನ್ನಯ್ ” ಸ್ಮರಣಾರ್ಥ ಮಾರ್ಚ್ 1 ರಂದು  ಪುರುಷರ ಗ್ರಾಮ ಸೀಮತ 55 ಕೆಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಲಿದೆ. ಈ ಪಂದ್ಯಾಟದಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೆ 800 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.

ಈ ಕಬಡ್ಡಿ ಕಾರ್ಯಕ್ರಮದಲ್ಲಿ ಈಜು ತಜ್ಞ ಈಶ್ವರ್ ಮಲ್ಪೆ, ರಾಷ್ಟ್ರೀಯ ಆಟಗಾರ್ತಿ ಅರ್ಚನಾ, ಪ್ರೋ ಕಬಡ್ಡಿ ಆಟಗಾರ ಗಗನ್, ರಾಷ್ಟ್ರೀಯ ಆಟಗಾರ ಸುಶಾಂತ್ ಶೆಟ್ಟಿ, ರಾಷ್ಟ್ರೀಯ ಆಟಗಾರ ಶಶಾಂಕ್, ರಾಷ್ಟ್ರೀಯ ಆಟಗಾರ ಆಫ್ರಿದ್ ಇವರು ಆರು ಮಂದಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಮಾರ್ಚ್1 ರಂದು ರಾತ್ರಿ 8:30 ಕ್ಕೆ ಸರಿಯಾಗಿ ಉದ್ಘಾಟನಾ ಸಮಾರಂಭ ಆರಂಭವಾಗಲಿದ್ದು ನಂತರ ಕಬಡ್ಡಿ ಪಂದ್ಯಾಟ ಆರಂಭವಾಗಲಿದ್ದು. ಮಾರ್ಚ್ 2 ರಂದು ಬೆಳಗ್ಗೆ 8:30 ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಗ್ರಾಮ ಸೀಮಿತ ವಿಭಾಗ ಮತ್ತು 55 ಕೆಜಿ ವಿಭಾಗದಲ್ಲಿ ಬೇರೆ ಬೇರೆ ಬಹುಮಾನಗಳಾಗಿ ಪ್ರಥಮ 10010/- , ದ್ವೀತಿಯ 7010/-, ತೃತೀಯ 5010/- , ಚತುರ್ಥಿ 3010/- ಹಾಗೂ ಯಂಗ್ ಬಾಯ್ಸ್ ಟ್ರೋಫಿ ನೀಡಲಿದ್ದಾರೆ.ಯಂಗ್ ಬಾಯ್ಸ್ ಸವಣಾಲು ಸಮಿತಿಯ ಅಧ್ಯಕ್ಷ ನವೀನ್ ಗೌಡ, ಉಪಾಧ್ಯಕ್ಷ  ಶಿತೇಶ್ ಗೌಡ, ಕಾರ್ಯದರ್ಶಿ ಸುದೀಪ್, ಜೊತೆ ಕಾರ್ಯದರ್ಶಿ ಭರತೇಶ್ ಹೆಗ್ಡೆ, ಕೋಶಾಧಿಕಾರಿ ಸ್ವಾಬಿರ್, ಜೊತೆ ಕೋಶಾಧಿಕಾರಿ ಕಾರ್ತಿಕ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಚಪ್ಪಿ, ಸಂಘಟನಾ ಕಾರ್ಯದರ್ಶಿ ನೌಶದ್ ಕಬಡ್ಡಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಬೇಕಾಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

- Advertisement -
spot_img

Latest News

error: Content is protected !!