- Advertisement -
- Advertisement -
ವಿಟ್ಲ: ಇಲ್ಲಿನ ಮಾಣಿಗುತ್ತು ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಮತ್ತು ಗ್ರಾಮ ದೈವಗಳಾದ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳಿಗೆ ತಾ. 15ನೇ ಬುಧವಾರ ಗೊನೆ ಕಡಿದು ತಾ. 16ನೇ ಗುರುವಾರ ನಡೆಯಲಿರುವ ಧರ್ಮಮೆಚ್ಚಿ ಮತ್ತು ಧರ್ಮನೇಮಕ್ಕೆ ಗೊನೆ ಮುಹೂರ್ತ ಸಂಪ್ರದಾಯ ಪ್ರಕಾರ, ಗ್ರಾಮದ ತಂತ್ರಿಗಳಾದ ಪಳನೀರು ಅನಂತ್ ಭಟ್ ರವರ ಮಾರ್ಗದರ್ಶನದಂತೆ ನಡೆಯಿತು.
ಈ ಸಂದರ್ಭದಲ್ಲಿ ಗುತ್ತಿನ ಪ್ರಮುಖರು, ಗ್ರಾಮದ ಧಾರ್ಮಿಕ ಮುಖಂಡರು, ಮಾಣಿ ಅರೆಬೆಟ್ಟು ಗ್ರಾಮಸ್ಥರು, ದೈವ ಪರಿಚಾರಕರು ಉಪಸ್ಥಿತರಿದ್ದರು.
- Advertisement -