ಮಂಗಳೂರು: ದೇರಳಕಟ್ಟೆಯ ಫೋಟೋಸ್ಪಾಟ್ ಸ್ಟುಡಿಯೋದ ಮಾಲೀಕ ಧರಣೇಶ್ ಕೊಣಾಜೆ (38) ಅಸೌಖ್ಯದಿಂದ ನಿಧರಾಗಿದ್ದಾರೆ.
ಹೃದಯ ಸಂಬಂಧಿ ತೊಂದರೆಯ ಹಿನ್ನೆಲೆ ಕಾರಣ ಧರಣೇಶ್ ಅವರನ್ನು ಕೆಲವು ದಿನಗಳವರೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಕೊಣಾಜೆಯ ಬೊಳ್ಳೆಕುಮೇರ್ ನಿವಾಸಿಯಾಗಿದ್ದ ಧರಣೇಶ್, ಲಕ್ಷ್ಮಣ ಹಾಗೂ ಸತ್ಯವತಿ ಅವರ ಪುತ್ರ.
ಮೃತ ಧರಣೇಶ್ ಬಗ್ಗೆ ಕರಾವಳಿಯ ಖ್ಯಾತ ಫೋಟೋಗ್ರಾಫರ್ ಅಪುಲ್ ಆಳ್ವ ಇರಾ ತಮ್ಮ ಫೇಸ್ಬುಕ್ ನಲ್ಲಿ ಬರೆದದ್ದು ಹೀಗೆ..
“ದೀರ್ಘಕಾಲದ ಮಿತ್ರ, ಛಾಯಾಚಿತ್ರ ಲೋಕದಲ್ಲಿ ಏನಾದ್ರೂ ಸಾಧಿಸಬೇಕು ಅನ್ನೋ ಛಲಗಾರ, ತನ್ನ ಹೃದಯಸಂಬಂದಿ ಸಮಸ್ಯೆ ಕಾಡ್ತಾ ಇದ್ರೂ ದೇರಳಕಟ್ಟೆ ಬಳಿ ಸ್ವಂತ ಸ್ಟುಡಿಯೋ ಉದ್ಯಮವನ್ನು ಆರಂಭಿಸಿ ಯಶಸ್ವಿಯಾಗಿ, ಮದುವೆ ಸಂಭ್ರಮ ಸೇರಿದಂತೆ ಅನೇಕ ಮನೆಮನಗಳ ನೆನಪುಗಳನ್ನು ತನ್ನ ಕ್ಯಾಮರಾದೊಳಗೆ ಸೆರೆ ಹಿಡಿದ ಆತ್ಮೀಯ ಮಿತ್ರ ಧರ್ಣೇಶ್ ಕೊಣಾಜೆ ಇನ್ನು ನೆನಪು ಮಾತ್ರ. ಛಾಯಾಗ್ರಹಣ ಕ್ಷೇತ್ರದಲ್ಲಿ ಅನೇಕ ಗ್ರಾಹಕವರ್ಗವನ್ನು ಹೊಂದಿ, ನನ್ನಿಂದಾಗುವವಷ್ಟು ಹೊಸತನವನ್ನು ನೀಡಿದ ಕಲೆಗಾರ. ಅನೇಕ ಬಾರಿ ನನ್ನ ಜೊತೆಗೆ ಶೂಟ್ ನಲ್ಲಿರುವಾಗ ಎಷ್ಟೇ ಸುಸ್ತು, ಶ್ವಾಸ ಸಮಸ್ಯೆ, ಏನೇ ನೋವು ಇದ್ರೂ ಕ್ಯಾಮೆರಾ ಹಿಡಿದು ಎಲ್ಲರನ್ನು ನಗಿಸ್ತಾ ಇದ್ದ. 2008ರಲ್ಲಿ ಕೊಣಾಜೆ ಯೂನಿವರ್ಸಿಟಿ ಗಣೇಶೋತ್ಸವದಲ್ಲಿ ಪರಿಚಯನಾದ ಮಿತ್ರ ತನ್ನ ಕೊನೆಯ ದಿನದವರೆಗೂ ಒಡನಾಡಿಯಾಗಿದ್ದ.ಅಪುಲ್ ಕ್ಯಾಮರಾ ಚೂರ್ ಸೆಟ್ಟಿಂಗ್ ಸಮ ಇಜ್ಜಿ ಅಂತ ಕಾಲ್ ಮಾಡಿ ಕ್ಯಾಮರಾ ಸೆಟ್ಟಿಂಗ್ ಬಗ್ಗೆ ಅನೇಕ ಸಲ ಮಾತುಕತೆ, ಫೋಟೋ ಪ್ರಿಂಟಿಂಗ್ ಮಷೀನ್ ಸೇರಿದಂತೆ ಕ್ಯಾಮರಾ ಬದಲಾವಣೆ ಹೀಗೆ ಗ್ರಾಹಕರಿಗೆ ಎಲ್ಲೂ ಕೂಡ ಫೋಟೋ ಕ್ವಾಲಿಟಿಗೆ ಕೊರತೆ ಆಗಬಾರದು ಅಂತ ನಿಕೋನ್ ಹೊಸ ಕ್ಯಾಮರಾಗಳ ಬದಲಾವಣೆ ಮಾಡ್ತಾ ಇದ್ದ. D40, D80, D300s, 610, 750, 850 ಕ್ಯಾಮರಾಗಳಲ್ಲಿ ಧರ್ಣೇಶ್ ಪಳಗಿದವರು. ಹೆಚ್ಚಿನ ಬಾರಿ ಫೋಟೋ ಟೂರ್ ಹೋದಾಗ ಎನನ್ ಲೆಪ್ಪುಜರ್ ಅಂತ ಹೇಳ್ತಾ ಇದ್ದ ಧರ್ಣೇಶ್ ಜೊತೆಗೆ ಹತ್ತಕ್ಕೂ ಹೆಚ್ಚು ಬಾರಿ ವಸಂತ್ ಕೊಣಾಜೆ ಜೊತೆಗೆ ನಾವು ಕರ್ನಾಟಕದ ಹಲವೆಡೆ ಟ್ರಾವೆಲ್ ಮಾಡಿದ್ದೇವೆ. ದೀರ್ಘ ಕಾಲದ ಅಸೌಖ್ಯದಲ್ಲಿದ್ದ ಮಿತ್ರ ಧರ್ಣೇಶ್ ಕೊಣಾಜೆ ವೃತ್ತಿಯಲ್ಲಿ ಸಕ್ರಿಯರಾಗಿದ್ರೂ ಕೆಳ ದಿನಗಳಲ್ಲಿ ಅರೋಗ್ಯ ಸಮಸ್ಯೆ ತೀವ್ರ ಕಾಡಿತ್ತು. ಕಳೆದ ರಾತ್ರಿ ತಾನು ಸಾಕಿ ಬೆಳೆಸಿದ ತನ್ನ ಪ್ರೀತಿಯ ಸ್ಟುಡಿಯೋ ಫೋಟೋ ಸ್ಪಾಟ್ ಮುಂಭಾಗದಲ್ಲಿರುವ ಹೆಗ್ಡೆ ಆಸ್ಪತ್ರೆಯಲ್ಲೇ ತನ್ನ ಜೀವನದ ಪಯಣ ಮುಗಿಸಿದ್ದಾರೆ. ಅವರ ಕುಟುಂಬಕ್ಕೆ ಭಗವಂತನ್ನು ದುಃಖ ಸಹಿಸುವ ಶಕ್ತಿ ನೀಡಲಿ ?. ಓಂ ಶಾಂತಿ”
https://www.facebook.com/apul.ira/posts/3768463086554154