Monday, June 30, 2025
Homeಕರಾವಳಿಮಂಗಳೂರು: ಸ್ಕೂಟರನ್ನು ತಪ್ಪಿಸಲು ಹೋಗಿ ಬೈಕ್ ಪಲ್ಟಿ, ಸವಾರ ಸಾವು

ಮಂಗಳೂರು: ಸ್ಕೂಟರನ್ನು ತಪ್ಪಿಸಲು ಹೋಗಿ ಬೈಕ್ ಪಲ್ಟಿ, ಸವಾರ ಸಾವು

spot_img
- Advertisement -
- Advertisement -

ಮಂಗಳೂರು: ರಸ್ತೆಯಲ್ಲಿ ಬೇಕಾಬಿಟ್ಟಿ ಚಲಾಯಿಸಿದ ಸ್ಕೂಟರ್ ನ ತಪ್ಪಿಸಲು ಹೋಗಿ ರಸ್ತೆ ಬದಿಯಲ್ಲಿದ್ದ ಅಂಗಡಿಯ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಗರದ ಪದವಿನಂಗಡಿ ಬಳಿ ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ.

ಮೃತ ಬೈಕ್ ಸವಾರನನ್ನು ಬೊಂದೆಲ್, ಕೃಷ ನಗರ ದ ನಿವಾಸಿ ಪ್ರಶಾಂತ್ ಸನತ್ ಗಂಭೀರ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯವಾಗಿದ್ದ ಇವರನ್ನು ಕೂಡಲೇ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಮೃತ ಪ್ರಶಾಂತ್ ನೀರುಮಾರ್ಗದಲ್ಲಿರುವ ಚೇತನ ಎಂಟರ್ ಪ್ರೈಸಸ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು,

ಘಟನೆಯ ವಿವರ:
ಸಂಚಾರಿ ನಿಯಮ ಉಲ್ಲಂಘಿಸಿ ಒವ್‌ ವೇಯಲ್ಲಿ ಸ್ಕೂಟಿ ಸವಾರನೊಬ್ಬ ರಸ್ತೆ ಕ್ರಾಸ್ ಮಾಡಲು ಯತ್ನಿಸಿದ್ದು , ಇದನ್ನು ತಪ್ಪಿಸಲೆತ್ನಿಸಿದ ಬೋಂದೆಲ್ ನಿಂದ ಕೆಪಿಟಿಸಿ ವೇಗವಾಗಿ ಬರುತ್ತಿದ್ದ ಬೈಕ್ ಸವಾರನ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿದ್ದ ಅಂಗಡಿಗೆ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರ ಎತ್ತರಕ್ಕೆ ಎಸೆದಂತಾಗಿ ರಸ್ತೆಗಪ್ಪಳಿಸಿದ್ದಾನೆ . ಮಾತ್ರವಲ್ಲದೆ ಈತನ ಬೈಕ್ ಹಿಂಬದಿಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಡಿದಿದೆ.

ಈ ಎಲ್ಲಾ ಭೀಕರ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

- Advertisement -
spot_img

Latest News

error: Content is protected !!